ಕರ್ನಾಟಕ ಸಮತಾ ಸೈನಿಕ ದಳಕ್ಕೆ ಯುವ ಮುಖಂಡರ ಸೇರ್ಪಡೆ

ಕರ್ನಾಟಕ ಸಮತಾ ಸೈನಿಕ ದಳಕ್ಕೆ ಯುವ ಮುಖಂಡರ ಸೇರ್ಪಡೆ

ಬೆಂಗಳೂರು, ಅ. 29: ಕರ್ನಾಟಕ ಸಮತಾ ಸೈನಿಕ ದಳದ ಕೇಂದ್ರ ಕಛೇರಿಯಲ್ಲಿಂದು ರಾಜ್ಯಾಧ್ಯಕ್ಷರಾದ ಚನ್ನಕೃಷ್ಣಪ್ಪ ರವರ ನೇತೃತ್ವದಲ್ಲಿಂದು ಬೆಂಗಳೂರಿನ ನೂರಾರು ಯುವ ಮುಖಂಡರು ಸೇರ್ಪಡೆಯಾದರು.

ಪ್ರತಿಯೊಬ್ಬ ಯುವ ಮುಖಂಡನಿಗೂ ರಾಜ್ಯಾದ್ಯಕ್ಷರು ಶಾಲು ಹಾಕುವ ಮೂಲಕ ಬರಮಾಡಿಕೊಂಡರು. ಯುವ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಾಬಾ ಸಾಹೇಬ ಅಂಬೇಡ್ಕರ್‌ ರವರು ಸ್ಥಾಪಿಸಿದ ಸಂಘವನ್ನು ಅವರ ದಾರಿಯಲ್ಲೆ ಮುನ್ನಡೆಸುತ್ತಾ ಬಂದಿದ್ದು, ಹಲಾವರು ಜನಪರ ಕೆಲಸ ಮಾಡುತ್ತ ಬಂದಿದೆ ಎಂದರು.

ಸಂಘಕ್ಕೆ ಸೇರ್ಪಡೆಗೊಂಡ ಯುವ ಮುಖಂಡರು ಸಂವಿಧಾನ, ಅಂಬೇಡ್ಕರ್‌ ಮತ್ತು ಬುದ್ಧನ ಮಾರ್ಗದಲ್ಲಿ ನಡೆಯುತ್ತೇವೆ ಎಂದು ಸೇರ್ಪಡೆಗೊಂಡ ಪ್ರತಿಯೊಬ್ಬ ಮುಖಂಡರು ಪ್ರತಿಜ್ಞೆ ಮಾಡಿದರು. ಹಾಗೆಯೆ ಅಂಬೇಡ್ಕರ್ ತೋರಿಸಿದ ದಾರಿಯಲ್ಲೆ ನಡೆಯುತ್ತೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಸಮತಾ ಸೈನಿಕ ದಳಕ್ಕೆ ಸೇರ್ಪಡೆಗೊಂಡ ಯುವ ಮುಖಂಡ ಪುನೀತ್ ರವರನ್ನು ಪೂರ್ವ ತಾಲೂಕು ಯುವ ಘಟಕದ ಗೌರವಾಧ್ಯಕ್ಷರಾಗಿ, ರೇವಂತ್.‌ವಿ ರವರನ್ನು ಅಧ್ಯಕ್ಷರಾಗಿ ಮತ್ತು ಅಭಿಲಾಷ್‌ ರವರನ್ನು ಕಾರ್ಯಾಧ್ಯಕ್ಷರಾಗಿ ನೇಮಕ ಮಾಡಿದರು. ಅದಲ್ಲದೆ 23ಜನರನ್ನು ಪದಾದಿಕಾರಿಗಳಾಗಿ ಆಯ್ಕೆ ಮಾಡಲಾಗಿದೆ ರಾಜ್ಯಾಧ್ಯಕ್ಷರು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ರಾಜ್ಯ ಮುಖಂಡರಾದ ಯುವಶಕ್ತಿ ಸೂರಿ,ಆಟೋ ಘಟಕದ ಅಧ್ಯಕ್ಷರಾದ ವರದರಾಜ್‌, ತಾಲೂಕು ಅಧ್ಯಕ್ಷರಾದ ಅಶೋಕ, ಮಹಿಳಾ ಘಟಕದ ಅಧ್ಯಕ್ಷರಾದ ಮಂಜುಳಾ, ಸುಮಿತ್ರಾ, ಶಿಲ್ಪಾ ಹಾಗೂ ಕರ್ನಾಟಕ ಸಮತಾ ಸೈನಿಕ ದಳದ ಹಲವಾರು ಮುಖಂಡರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related