ಸಚಿವ ಸ್ಥಾನ ನೀಡದಿದ್ದರೆ ಪ್ರತಿಭಟನೆಯ ಎಚ್ಚರಿಕೆ

ಸಚಿವ ಸ್ಥಾನ ನೀಡದಿದ್ದರೆ ಪ್ರತಿಭಟನೆಯ ಎಚ್ಚರಿಕೆ

ಸಿರುಗುಪ್ಪ: ತಾಲೂಕಿನ ಸೀಮಾಂಧ್ರ ಗಡಿಭಾಗದ ಹೊಸಳ್ಳಿ, ಹಾಗಲೂರು ಗ್ರಾಮ ಪಂಚಾಯಿತಿ ಸದಸ್ಯರುಗಳು, ಮುಖಂಡರುಗಳಿಂದ  ಸಿರುಗುಪ್ಪ  ಕ್ಷೇತ್ರದ ಶಾಸಕ ಎಂ ಎಸ್ ಸೋಮಲಿಂಗಪ್ಪ ಅವರಿಗೆ  ಸಚಿವ ಸ್ಥಾನ ನೀಡಲು ಮಂಗಳವಾರ ಸಭೆ ನಡೆಸಿ ಆಗ್ರಹ ವ್ಯಕ್ತ ಪಡಿಸಿದರು.

ಮೂರುಬಾರಿ ಶಾಸಕರಾಗಿ ಪಕ್ಷನಿಷ್ಠೆ ಹೊಂದಿರುವ  ಸೋಮಲಿಂಗಪ್ಪ ಅವರಿಗೆ ಈ ಬಾರಿ ಮಂತ್ರಿ ಸ್ಥಾನ ನೀಡದಿದ್ದರೆ ಅನಿವಾರ್ಯವಾಗಿ ಮುಂಬರುವ ದಿನಗಳಲ್ಲಿ ಹೋರಾಟ ಮಾಡುವ ಎಚ್ಚರಿಕೆ ನೀಡಲಾಗಿದೆ.

ಕಠಿಣ ಸಂದರ್ಭದಲ್ಲಿಯೂ ಪಕ್ಷ ಬದಲಾವಣೆ ಮಾಡದೆ  ಪಕ್ಷಕ್ಕೆ ನಿಷ್ಠೆಯಿಂದ  ಶಾಸಕ ಸೋಮಲಿಂಗಪ್ಪ ಅತ್ಯಂತ ಸರಳ ಸಜ್ಜನಿಕೆಯ ಶಾಸಕ ಎಂ.ಎಸ್ ಸೋಮಲಿಂಗಪ್ಪನವರು ತಾವಾಗಿಯೇ ಸ್ವತಃ  ಯಾವುದೇ ಸ್ಥಾನಕ್ಕೂ ಇದುವರೆಗೂ ಬೇಡಿಕೆ ಇಟ್ಟಿಲ್ಲ ಎಂಬ ಅಭಿಪ್ರಾಯವ್ಯಕ್ತವಾಗಿದೆ.

ಎಸ್.ಟಿ. ಮೀಸಲು ಕ್ಷೇತ್ರ ಪ್ರತಿನಿಧಿಸುತ್ತಾ ವಿವಾದೀತ ನಾಯಕರಾಗಿರುವ ಇವರು ಮೂರು ಬಾರಿ ಶಾಸಕರಾಗಿದ್ದಾರೆ.  ಸಿರುಗುಪ್ಪ ವಿಧಾನಸಭಾ ಕ್ಷೇತ್ರಕ್ಕೆ ಕೆಲ ದಶಕಗಳಿಂದಲೂ ಯಾವುದೇ ಮಂತ್ರಿ ಸ್ಥಾನ ನೀಡಿರುವುದಿಲ್ಲ. ಇದರಿಂದ   ಸಿರುಗುಪ್ಪ ವಿಧಾನ ಸಭಾ ಕ್ಷೇತ್ರವನ್ನು ಕಡೆಗಣಿಸಲಾಗಿದೆ. ಈಗಲಾದರೂ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಹೊಸಳ್ಳಿ, ಹಾಗಲೂರು ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರುಗಳಿಂದ ಆಗ್ರಹಿಸಲಾಗಿದೆ.

ಈ ವೇಳೆ ಹೊಸಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯ ಪತಿ ಪರಶುರಾಮ ಉಪಾಧ್ಯಕ್ಷ ಕಲ್ಲಪ್ಪ, ಕರೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಎನ್.ರಾಘವೇಂದ್ರ ರೆಡ್ಡಿ.  ಮುಖಂಡರಾದ ಪಿ.ಪ್ರಕಾಶ ರೆಡ್ಡಿ,  ಕೆ.ಶ್ರೀಶೈಲಪ್ಪ,  ಬಿ.ಪರಶುರಾಮಪ್ಪ, ಆರ್. ಮಾಳಪ್ಪ, ಹೆಚ್.ಪೋತಿಲಿಂಗನ ಗೌಡ, ವಿ.ಶೇಕಣ್ಣ, ದಿವಾಕರ ಗೌಡ, ಮಲ್ಲಿಕಾರ್ಜುನಾ ರೆಡ್ಡಿ ಸೇರಿದಂತೆ ಅನೇಕರು ಹಾಜರಿದ್ದರು.

Related