ಏಪ್ರಿಲ್ ನಂತರ ಸಿಎಂಯಾಗಿ ಮುಂದುವರಿಯಲ್ಲ!

ಏಪ್ರಿಲ್ ನಂತರ ಸಿಎಂಯಾಗಿ ಮುಂದುವರಿಯಲ್ಲ!

ಮೈಸೂರು : ಸಿಎಂ ಬಿ.ಎಸ್ ಯಡಿಯೂರಪ್ಪ ಮತ್ತಿತರೆ ಬಿಜೆಪಿ ನಾಯಕರು ನಾಯಕತ್ವ ಬದಲಾವಣೆಯ ಯಾವುದೇ ಸೂಚನೆ ಇಲ್ಲ ಎಂದು ಮತ್ತೆ ಮತ್ತೆ ಸ್ಪಷ್ಟ ಪಡಿಸುತ್ತಿದ್ದಾಗಲೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತ್ರ ಏಪ್ರಿಲ್ ನಂತರ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಲಾಗುತ್ತದೆ ಎಂದು ಮತ್ತೆ ಹೇಳಿಕೆಯಲ್ಲಿ ತಿಳಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ, ಯಡಿಯೂರಪ್ಪ ಅವರನ್ನು ಏಪ್ರಿಲ್ ನಂತರ ಸಿಎಂ ಹುದ್ದೆಯಿಂದ ಕೈಬಿಡಲಾಗುತ್ತದೆ ಎಂದರು.

ಆಪರೇಷನ್ ಕಮಲದಿಂದ ನೂತನವಾಗಿ ಸಚಿವರಾದ ಸಿ.ಪಿ ಯೋಗೇಶ್ವರ್ ನೀಡಿದ ಹಣ ಮತ್ತು “ಬ್ಲ್ಯಾಕ್ ಮೇಲ್ ಸಿಡಿ”ಯ ಬಗ್ಗೆ ನ್ಯಾಯಾಂಗ  ತನಿಖೆ  ನಡೆಸಬೇಕೆಂದು  ಅವರು  ಒತ್ತಾಯಿಸಿದರು. ಈ ಸಂಬಂಧ  ಹೈಕೋರ್ಟ್ನ ನ್ಯಾಯಾಧೀಶರು ನ್ಯಾಯಾಂಗ ತನಿಖೆ ನಡೆಸಬೇಕೆಂದು ನಾನು ಒತ್ತಾಯಿಸುತ್ತೇನೆ.” ಸಿದ್ದರಾಮಯ್ಯ ಆಗ್ತಹಿಸಿದ್ದಾರೆ.

Related