ಬಿಎಸ್ ವೈ ವಿರುದ್ಧ ಡಿವಿಎಸ್‌ ಕಿಡಿಕಾರಿದ್ಯಾಕೆ?

ಬಿಎಸ್ ವೈ ವಿರುದ್ಧ ಡಿವಿಎಸ್‌ ಕಿಡಿಕಾರಿದ್ಯಾಕೆ?

ಬೆಂಗಳೂರು: ಲೋಕಸಭಾ ಚುನಾವಣೆಗೆ ಕೊನೆಯ ಕ್ಷಣದಲ್ಲಿ ಡಿವಿ ಸದಾನಂದ ಗೌಡರಿಗೆ ಬಿಜೆಪಿಯಿಂದ ಟಿಕೆಟ್ ಕೈತಪ್ಪಿರುವುದರಿಂದ ಡಿವಿ ಸದಾನಂದ ಗೌಡ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ ಎಂಬ ಬಿಸಿಬಿಸಿ ಚರ್ಚೆ ರಾಜ್ಯ ರಾಜಕೀಯದಲ್ಲಿ ಚರ್ಚೆಯಾಗುತ್ತಿದೆ.

ಆದರೆ ಬಿಜೆಪಿ ನಾಯಕರು ಡಿವಿ ಸದಾನಂದ ಅವರ ಮನವೊಲಿಸಲು ಹರ ಸಾಹಸ ಪಡುತ್ತಿದ್ದಾರೆ.

ಇಂದು ಸದಾನಂದಗೌಡರ ಹುಟ್ಟು ಹಬ್ಬ ಹಿನ್ನೆಲೆ ಆ ನೆಪದಲ್ಲಿ ಶುಭಕೋರಲು ಆಗಮಿಸಿದ ವಿಪಕ್ಷ ನಾಯಕ ಆರ್ ಅಶೋಕ್ ಅಶ್ವಥ್ ನಾರಾಯಣ್ ಈ ವೇಳೆ ಗೌಡರ ನಿವಾಸದೊಳಗೆ ಕರೆದುಕೊಂಡು ಹೋಗಿ ಮೂವರು ಪ್ರತ್ಯೇಕ ಚರ್ಚೆ ನಡೆಸಿದ್ದಾರೆ.

ಸದ್ಯ ನಾಳೆ ಸುದ್ದಿಗೋಷ್ಟಿ ನಡೆಸುವೆ ಎಂದಿರೋ ಸದಾನಂದ ಗೌಡ ಟಿಕೆಟ್ ಮಿಸ್ ಹಾಗೂ ಕಾಂಗ್ರೆಸ್ ನಾಯಕರ ಸಂಪರ್ಕದ ಬಗ್ಗೆ ಹೇಳುವ ಸಾಧ್ಯತೆ.

ಈ‌ ನಿಟ್ಟಿನಲ್ಲಿ ಸದನಂದ ಗೌಡರ ಜೊತೆ ಚರ್ಚಿಸಿ ಅವರನ್ನ ಸಮಾಧಾನ ಮಾಡುವ ಕೆಲಸಕ್ಕೆ‌ ಮುಂದಾಗಿರೋ ನಾಯಕರು ಪರೋಕ್ಷವಾಗಿ ಬಿಎಸ್ ವೈ ವಿರುದ್ದ ಅಕ್ರೋಶ ಹೊರ ಹಾಕಿರೋ ಡಿವಿ ಸದಾನಂದಗೌಡ ಶೋಭಾ ಕರಂದ್ಲಾಜೆಗೆ ಟಿಕೆಟ್ ಕೊಡಿಸಲು‌ ನನ್ನ ಬಲಿಪಶು ಮಾಡಿದ್ದಾರೆ ಎಂದು ಆಕ್ರೋಶ  ವ್ಯಕ್ತಪಡಿಸಿದ್ದಾರೆ.

Related