ಗೋಪಾಲಯ್ಯ ದಿಢೀರ್ ಭೇಟಿ

ಗೋಪಾಲಯ್ಯ ದಿಢೀರ್ ಭೇಟಿ

ಮಹದೇವಪುರ : ಬೆಂಗಳೂರು ಪೂರ್ವ ತಾಲೂಕಿನ ಹೂಡಿಯಲ್ಲಿ ಇರುವ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಗೋಡಾನ್‌ಗೆ ಸಚಿವ ಗೋಪಾಲಯ್ಯ ಅವರು ಧಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಅವರು ಗ್ರಾಹಕರಿಗೆ ವಿತರಿಸುವ ಆಹಾರ ಧಾನ್ಯಗಳಲ್ಲಿ ಕಳಪೆ ಆಹಾರ ಇರುವ ಖಚಿತ ಮಾಹಿತಿ ಮೇರಿಗೆ ಗೋಡಾನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಹೂಡಿಗೆ ಬಂದಿದ್ದ ಆರು ಲಾರಿಗಳ ಪೈಕಿ ಒಂದು ಲಾರಿಯಲ್ಲಿ ಕಳಪೆ ಗುಣಮಟ್ಟದಿಂದ ಕೂಡಿರುವುದು ಆಹಾರ ಧಾನ್ಯಗಳು ಬೆಳಕಿಗೆ ಬಂದಿದೆ.

ಕಳೆದ ಭಾರಿ ಕಲಬುರ್ಗಿ, ಬೀದರ್, ಹಾಗೂ ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡಿದ ಸಂಧರ್ಭದಲ್ಲೂ ಕಳಪೆ ಆಹಾರ ಪತ್ತೆಯಾಗಿದ್ದು, ಸರ್ಕಾರದಿಂದ ಕಂಪನಿಗಳಿಗೆ ನೀಡುವಂತಾ ನೂರು ಕೆಜಿಗಳಲ್ಲಿ ಶೇಕಡಾ 83℅ರಷ್ಟು ಸ್ವಚ್ಚತೆ ಮಾಡಿ ವಿತರಿಸಬೇಕು ಎಂದರು.
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತನಿಖೆಗೆ ಅದೇಶಿಸಿ, ಕಂಪನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

Related