ವಿಕಾಸ ಬ್ಯಾಂಕ್ ಕಳ್ಳತನ ವಿಫಲ

  • In Crime
  • August 6, 2021
  • 1322 Views
ವಿಕಾಸ ಬ್ಯಾಂಕ್ ಕಳ್ಳತನ ವಿಫಲ

ಕೊಲ್ಹಾರ: ಪಟ್ಟಣದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನಲ್ಲಿ ವಿಫಲ ಕಳ್ಳತನ ಪ್ರಯತ್ನ ದಿ. ೬ರ  ರಾತ್ರಿ ೧೨ರ ಸುಮಾರಿಗೆ ನಡೆದಿದೆ.ಕಳ್ಳರು  ವಿದ್ಯುತ್ ಸಂಪರ್ಕ ಖಡಿತಗೊಳಿಸಿ, ಬ್ಯಾಂಕ್ ಹೊರಗಿನ, ಒಳಗಿನ ಸಿಸಿ ಕ್ಯಾಮರಾವನ್ನು ಬಂದ್ ಮಾಡಿ ಬ್ಯಾಂಕಿನ ಹಿಂದುಗಡೆ ಇರುವ ಕಿಡಕಿಯ ಕೆಳಗಿನ ಗೋಡೆಯನ್ನು ಒಡೆದು ಒಳಗೆ  ಹೋದರು. ಮುಖ್ಯ ಲಾಕರ್ ಒಡೆಯಲು ಮಾಡಿದ್ದ ಪ್ರಯತ್ನ ವಿಫಲವಾಯಿತ್ತು.  ಯಾವುದೇ ಕಾಗದಪತ್ರಗಳು, ವಸ್ತುವನ್ನು ಮುಟ್ಟದೆ ಮೂರು ಜನ ಅಲ್ಲಿಂದ ಪರಾರಿಯಾಗಿದ್ದ ದೃಶ್ಯ ಇನ್ನೊಂದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರೆಸಿದ್ದಿ, ಬಸವನ ಬಾಗೇವಾಡಿ ಡಿವೈಎಸ್ಪಿ ಅರುಣಕುಮಾರ ಕೊಳುರು, ಸಿಪಿಐ ಸೋಮಶೇಖರ್ ಜುಟಲ್ ಹಾಗೂ ಪಿಎಸ್‌ಐ ಸಿದ್ದು ಯಡಹಳ್ಳಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related