ಎಸ್ಐಟಿ ಅಧಿಕಾರಿಗಳು ಮೊದಲು ದೇವರಾಜೇಗೌಡರ ಬಾಯಿ ಬಿಡಿಸಬೇಕು

ಎಸ್ಐಟಿ ಅಧಿಕಾರಿಗಳು ಮೊದಲು ದೇವರಾಜೇಗೌಡರ ಬಾಯಿ ಬಿಡಿಸಬೇಕು

ಬೆಂಗಳೂರು: ಪ್ರಜ್ವಲ್ ಪೆನ್ ಡ್ರೈ ಪ್ರಕರಣದಲ್ಲಿಎಸ್ಐಟಿ ಅಧಿಕಾರಿಗಳು ಮೊದಲು ದೇವರಾಜೇಗೌಡ ರನ್ನು ಎಳೆದುಕೊಂಡು ಹೋಗಿ ವಿಚಾರ ನಡೆಸಿದರೆ ಮಾತ್ರ ಇದರ ಹಿಂದೆ ಯಾರಿದ್ದಾರೆ ಎಂಬ ಅಸಲಿಎತ್ತು ಬಯಲಾಗುತ್ತದೆ ಎಂದು ಮಾಜಿ ಸಂಸದ ಶಿವರಾಮೇಗೌಡ ಅವರು ಹೇಳಿದ್ದಾರೆ.

ನಗರದಲ್ಲಿಂದು ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಲ್ಲಿಯವರೆಗೆ ಬಿಜೆಪಿಯ ಮುಖಂಡ ದೇವರಾಜೇಗೌಡ ಯಾರ ಜೊತೆ ಫೋನಿನಲ್ಲಿ ಮಾತನಾಡಿದ್ದಾರೆ ಎಂಬ ತನಿಖೆಯನ್ನು ಮಾಡಿದಾಗ ಮಾತ್ರ ಈ ಪ್ರಕರಣಕ್ಕೆ ಒಂದು ಅರ್ಥ ಸಿಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರೇವಣ್ಣಗೆ 7 ದಿನಗಳ ಕಾಲ ನ್ಯಾಯಾಂಗ ಬಂಧನ

ದೇವರಾಜೇಗೌಡ ನನ್ನನ್ನು ನೇರವಾಗಿ ದುಡ್ಡನ್ನು ಕೇಳಿಲ್ಲ. ದೇವರಾಜೇಗೌಡ ಅವರ ಭಾವನೆ ಏನೆಂದರೆ… ಡಿಕೆ ಶಿವಕುಮಾರ್ ಹತ್ತಿರಕ್ಕೆ ಕರೆದುಕೊಂಡು ಹೋಗಿ ನನಗೆ ಏನಾದರೂ ದುಡ್ಡು ಕೊಡಿಸುತ್ತಾರೆ ಎಂಬ ಭಾವನೆಯಲ್ಲಿ ನನ್ನನ್ನು ಭೇಟಿ ಮಾಡಲು ದೇವರಾಜೇಗೌಡ ಅವರು ನಾನು ತಂಗಿದ ಹೋಟೆಲ್ ಗೆ ಬಂದು ನನ್ನನ್ನು ಭೇಟಿಯಾಗಿದ್ದಾರೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Related