ವಿ ಸೋಮಣ್ಣ, ಆರ್ ಅಶೋಕ್ ಒಂದಾದ್ರ?

ವಿ ಸೋಮಣ್ಣ, ಆರ್ ಅಶೋಕ್ ಒಂದಾದ್ರ?

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ನಂತರ ವಿ ಸೋಮಣ್ಣ ಅವರು ಸ್ವಪಕ್ಷಗಳ ಮೇಲೆ ಮುನಿಸಿಕೊಂಡಿದ್ದರು.

ಇದಾದ ನಂತರ ಕೆಲವು ದಿನಗಳ ಹಿಂದೆ ಮಾಜಿ ಸಚಿವ ವಿ ಸೋಮಣ್ಣ ಅವರು ಹೈಕಮಾಂಡ್ ಭೇಟಿಯ ಮಾಡಿ ಕೂಲ್ ಆಗಿದ್ದಾರೆ ಎಂದು ತಿಳಿದುಬಂದಿದೆ.

ಹೌದು, ವಿಧಾನಸಭಾ ಚುನಾವಣೆ ಮುಗಿದ ನಂತರ ಬಿ ಸೋಮಣ್ಣ ಅವರು ಮುನಿಸಿಕೊಂಡಿದ್ದರು. ಇವರನ್ನು ಸಮಾಧಾನ ಪಡಿಸಲು ವಿಪಕ್ಷ ನಾಯಕ ಆರ್ ಅಶೋಕ್ ಅವರು ಹಲವಾರು ಬಾರಿ ಪ್ರಯತ್ನ ಪಟ್ಟರು ಆ ಪ್ರಯತ್ನ ವಿಫಲವಾಗಿತ್ತು. ಆದರೆ ಇದೀಗ ಇಂದು ಮಾಜಿ ಸಚಿವ ವಿ ಸೋಮಣ್ಣ ಅವರ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿದ್ದಾರೆ.

ಹೌದು, ವಿಧಾನಸಭಾ ಚುನಾವಣೆ ಬಳಿಕ ಮುನಿಸಿಕೊಂಡಿದ್ದ ಮಾಜಿ ಸಚಿವ ವಿ.ಸೋಮಣ್ಣ ಹೈಕಮಾಂಡ್ ನಾಯಕರ ಬಳಿಕ ಸಾಫ್ಟ್ ಆಗಿದ್ದಾರೆ. ಇದೀಗ ಸಮಾಧಾನಗೊಂಡಿರುವ ಸೋಮಣ್ಣ ಅವರ ವಿಜಯನಗರ ನಿವಾಸಕ್ಕೆ ಆರ್.ಅಶೋಕ್ ಭೇಟಿ ನೀಡಿದ್ದಾರೆ.

ಈಗ ಸೋದರಿ, ಸೋಮಣ್ಣ ಪತ್ನಿ ಅವರು ಮಾಡಿದ ತಿಂಡಿಯನ್ನು ಆರ್.ಅಶೋಕ ಸೇವಿಸಿದ್ದಾರೆ. ಈ ವೇಳೆ ಸಂಸದ ತೇಜಸ್ವಿ ಸೂರ್ಯ ಸಹ ಉಪಸ್ಥಿತರಿದ್ದರು.

ಉಪಹಾರ ಸೇವನೆ ಬಳಿಕ ಆರ್.ಅಶೋಕ್, ವಿ.ಸೋಮಣ್ಣ ಮತ್ತು ತೇಜಸ್ವಿ ಸೂರ್ಯ ಜೊತೆಯಾಗಿಯೇ ಆಂಜನೇಯನ ದೇವಸ್ಥಾನಕ್ಕೆ ತೆರಳಿದರು. ಕಳೆದ ವಾರವಷ್ಟೇ ಹೈಕಮಾಂಡ್ ನಾಯಕರಾದ ಜೆಪಿ ನಡ್ಡಾ ಮತ್ತು ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಈ ವೇಳೆ ತಮ್ಮ ಹೆಸರನ್ನು ರಾಜ್ಯಸಭಾ ಸ್ಥಾನಕ್ಕೆ ಪರಿಗಣಿಸುವಂತೆ ಮನವಿ ಮಾಡಿಕೊಂಡಿದ್ದರು.

Related