ಮಾಜಿ IPS ಅಧಿಕಾರಿ ಅಣ್ಣಾಮಲೈಗೆ ಸಚಿವ ಸೋಮಣ್ಣ ಟಾಂಗ್

ಮಾಜಿ IPS ಅಧಿಕಾರಿ ಅಣ್ಣಾಮಲೈಗೆ ಸಚಿವ ಸೋಮಣ್ಣ ಟಾಂಗ್

ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಜಟಾಪಟಿಗೆ ಕಾರಣವಾದ ಮೇಕೆದಾಟು ಅಣೆಕಟ್ಟು ಯೋಜನೆಗೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಆಕ್ಷೇಪ ವ್ಯಕ್ತಪಡಿಸಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇದೀಗ ಸಚಿವ ವಿ ಸೋಮಣ್ಣ ಅಣ್ಣಾಮಲೈಗೆ ಟಾಂಗ್ ಕೊಟ್ಟಿದ್ದಾರೆ. ‘ಅವರು ಹುಟ್ಟಿರುವುದು ತಮಿಳುನಾಡಿನಲ್ಲಾದರು ಅವರು ಕರ್ನಾಟಕದ ಕಾವೇರಿ ತಪ್ಪಲಿನ ಅನೇಕ ಕಡೆ ಕೆಲಸ ಮಾಡಿದ್ದಾರೆ. ನೀರು, ನೆರಳು, ಗಾಳಿಯನ್ನು ಯಾರೂ ತಡೆಗಟ್ಟಬಾರದು, ಅಣ್ಣಾಮಲೈ ರಾಜ್ಯದ, ರಾಷ್ಟ್ರದ ಜನತೆಗೆ ಗೊತ್ತಾಗಿದ್ದು, ಕರ್ನಾಟಕದ ಜನತೆ ಕೊಟ್ಟ ಸಂದೇಶದಿಂದ. ಅವರು ಪರಿಸ್ಥಿತಿಯನ್ನು ಅವಲೋಕಿಸಬೇಕು, ಅವರೂ ನಮ್ಮ ಪಕ್ಷದ ಜವಬ್ದಾರಿಯುತ ಸ್ಥಾನದಲ್ಲಿದ್ದಾರೆ. ನಮ್ಮ ಜಾಗದಿಂದ ಕಾವೇರಿ ನದಿ ನೀರು ತಮಿಳುನಾಡಿಗೆ ಹೋಗ್ತಾಯಿದೆ. ಇದೀಗ ನಮ್ಮ ಜಾಗದಲ್ಲಿ ಆಣೆಕಟ್ಟು ನಿರ್ಮಿಸಲಾಗುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ ಎಂದು ಸೋಮಣ್ಣ ಅವರು ಅಣ್ಣಾಮಲೈಗೆ ಟಾಂಗ್ ಕೊಟ್ಟಿದ್ದಾರೆ.

Related