ಖ್ಯಾತೆಗೆ ಮುಂದಾದ ‘ಮಹಾ’ ಸರ್ಕಾರ

ಖ್ಯಾತೆಗೆ ಮುಂದಾದ ‘ಮಹಾ’ ಸರ್ಕಾರ

ಬೆಳಗಾವಿ : ಗಡಿ ವಿಚಾರಕ್ಕೆಸಂಬಂಧಿಸಿದಂತೆ ಹೊಸ ಖ್ಯಾತೆ ತೆಗೆಯಲು ಮುಂದಾಗಿರುವ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ, ಗಡಿ ವಿಚಾರವನ್ನೊಳಗೊಂಡ ಪುಸ್ತಕ ಬಿಡುಗಡೆ ಮಾಡಲು ಹೊರಟಿದೆ.

ಇತ್ತೀಚೆಗೆ ಬೆಳಗಾವಿ ವಿಚಾರವಾಗಿ ಟ್ವೀಟ್ ಮೂಲಕ ಖ್ಯಾತೆ ತೆಗೆದಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಇಂದು ಗಡಿ ವಿವಾದ ಕುರಿತ ಮಹಾರಾಷ್ಟ್ರ ಕರ್ನಾಟಕ ಸೀಮಾವಾದ-ಸಂಘರ್ಷ ಆನಿ ಎಂಬ ಪುಸ್ತಕ ಬಿಡುಗಡೆ ಮಾಡಲು ಹೊರಟಿದ್ದಾರೆ.

ಮಹಾರಾಷ್ಟ್ರ ಸರ್ಕಾರದಿಂದಲೇ ಸಿದ್ಧಗೊಂಡಿರುವ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ಕೂಡ ಭಾಗವಹಿಸುತ್ತಿರುವುದು ವಿಶೇಷ. ಪುಸ್ತಕ ಬಿಡುಗಡೆ ಬೆನ್ನಲ್ಲೇ ಗಡಿ ವಿವಾದ ಮತ್ತೆ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ದಟ್ಟವಾಗಿದೆ ಎಂದರು.

Related