ಬಿಜೆಪಿ ಸರ್ಕಾರ ವಿರುದ್ಧ ಸಿದ್ದು ವಾಗ್ದಾಳಿ

ಬಿಜೆಪಿ ಸರ್ಕಾರ ವಿರುದ್ಧ ಸಿದ್ದು ವಾಗ್ದಾಳಿ

ಬೆಂಗಳೂರು :ರಾಜ್ಯ ಬಿಜೆಪಿ ಸರ್ಕಾರ ರೈತರ, ಕಾರ್ಮಿಕರ ಸಮಸ್ಯೆಯನ್ನು ಪರಿಹಾರ ಮಾಡಬೇಕಾದ ಕರ್ತವ್ಯವನ್ನೇ ಮರೆತು ಹೋಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸರ್ಕಾರಕ್ಕೆ ಪತ್ರ ಬರೆದು ರೈತರು ಹಾಗೂ ಕಾರ್ಮಿಕರನ್ನು ಕರೆದು ಚರ್ಚೆ ಮಾಡಲು ಹೇಳಿದ್ದೆ. ಆದರೆ ಈ ಸರ್ಕಾರ ಸತ್ತು ಹೋಗಿದೆ. ಸರ್ಕಾರ ಕಾರ್ಮಿಕರು ಏನಾದ್ರೂ ಪ್ರತಿಭಟನೆ ಮಾಡಿಕೊಳ್ಳಲಿ, ಯಾವ ಮ್ಯಾನೇಜ್ಮೆಂಟ್ ಅವರು ಬೇಕಾದವರೂ ಆನ್ ಲೈನ್ ಕ್ಲಾಸ್ ಬಂದ್ ಮಾಡಿಕೊಳ್ಳಲಿ ಎಂದು ಕುಳಿತಿದೆ ಎಂದು ಕಿಡಿಕಾರಿದರು.

Related