ಸುಧಾ ಮೂರ್ತಿ ಕಾರ್ಯಕ್ಕೆ ಸುರೇಶ್ ಕುಮಾರ್ ಮೆಚ್ಚುಗೆ

ಸುಧಾ ಮೂರ್ತಿ ಕಾರ್ಯಕ್ಕೆ ಸುರೇಶ್ ಕುಮಾರ್ ಮೆಚ್ಚುಗೆ

ಬಾಗಲಕೋಟೆ : ಇಸ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರ ಸಧ್ಯ ಮನಸ್ಸು ಬಡ ಪ್ರತಿಭಾವಂತ ವಿದ್ಯಾರ್ಥಿ ಕಡೆ ವಾಲಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಯ ಕಷ್ಟ ಅರಿತು ಶೈಕ್ಷಣಿಕ ನೆರವಿಗೆ ಮುಂದಾಗಿದ್ದಾರೆ.

ಇತ್ತೀಚಿಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಖಾಜಿಬೀಳಗಿ ಗ್ರಾಮದ ವಿದ್ಯಾರ್ಥಿ ಸಂಜು ಬಿರಾದಾರ 625 ಅಂಕಕ್ಕೆ 617 ಅಂಕ ಪಡೆದು ರಾಜ್ಯಕ್ಕೆ 7ನೇ ರಾರಯಂಕ್ ಪಡೆದಿದ್ದಾನೆ.

ವಿದ್ಯಾರ್ಥಿಯ ಸಾಧನೆ ಗಮನಿಸಿ ಸುಧಾಮೂರ್ತಿಯವರು ಶೈಕ್ಷಣಿಕ ಖರ್ಚು ಭರಿಸಲು ಮುಂದಾಗಿದ್ದು, ಮುಂದಿನ 3 ವರ್ಷಗಳಲ್ಲಿ 1.50 ಲಕ್ಷ ಆರ್ಥಿಕ ನೆರವನ್ನು ನೀಡಲಿದ್ದಾರೆ. ಪ್ರತಿವರ್ಷ 50 ಸಾವಿರದಂತೆ ಶೈಕ್ಷಣಿಕ ಖರ್ಚಿಗೆ ಈ ಹಣ ಸಂದಾಯವಾಗಲಿದೆ.

ಸುಧಾಮೂರ್ತಿಯವರ ಈ ಸಹಾಯದ ಗುಣವನ್ನು ಶ್ಲಾಘಿಸಿದ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

Related