ಅತಿಥಿ ಶಿಕ್ಷಕರ ವಾರ್ಷಿಕ ರಾಜ್ಯ ಸಮ್ಮೇಳನ

ಅತಿಥಿ ಶಿಕ್ಷಕರ ವಾರ್ಷಿಕ ರಾಜ್ಯ ಸಮ್ಮೇಳನ

 ಬೆಂಗಳೂರು: ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ ಕರ್ನಾಟಕ ವತಿಯಿಂದ   ಇದೆ ತಿಂಗಳ  17 ರವಿವಾರ ದಂದು ನಗರದ  ಮೈಸೂರು ಬ್ಯಾಂಕ್ ಸರ್ಕಲ್ ನ ಶಿಕ್ಷಕರ ಸದನದಲ್ಲಿ “ಅತಿಥಿ ಶಿಕ್ಷಕರ ವಾರ್ಷಿಕ ರಾಜ್ಯ ಸಮ್ಮೇಳನ” ಹಮ್ಮಿಕೊಳ್ಳಲಾಗಿದೆ ಎಂದು  ಪ್ರದಾನ ಕಾರ್ಯದರ್ಶಿಯಾದ  ಬಸವರಾಜ ಕರಡಿಗುಡ್ಡರವರು  ತಿಳಿಸಿದರು.

ಪ್ರೆಸ್‌ ಕ್ಲಬ್‌ ನ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,  ಸಮ್ಮೇಳನವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪನವರು ಇನ್ನು ಹಲವು ನಾಯಕರ ಉಪಸ್ಥಿತಿಯಲ್ಲಿ ಉದ್ಘಾಟನೆ ನಡೆಯಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ರಾಜ್ಯದ ಸಮಸ್ತ ಅತಿಥಿ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು  ಮನವಿ ಮಾಡಿದರು.

 

ಪತ್ರಿಕಾಗೋಷ್ಟಿಯಲ್ಲಿ  ಗೌರವ ಅಧ್ಯಕ್ಷರಾದ  ಅನಂತ್‌ ನಾಯ್ಕ,, ಅಧ್ಯಕ್ಷರಾದ ಹನುಮಂತ್ ಹೆಚ್ ಎಸ್,ಉಪಾಧ್ಯಕ್ಷರಾದ ಶ್ರೀಮತಿ. ಚಿತ್ರಲೇಖ,  ನಿರ್ದೇಕ್ಷಕರಾದ ಶ್ರೀ ತಿಪ್ಪಣ್ಣ ಹತ್ತಿಗೂಡೂರು ಮತ್ತುಶ್ರೀ ಗಂಗಧರ ಹರಿಜನ್ ಉಪಸ್ಥಿತರಿದ್ದರು.

Related