ರಾಮನಿಗೆ ಅಭಿಷೇಕ, ಅರ್ಚನೆ

ರಾಮನಿಗೆ ಅಭಿಷೇಕ, ಅರ್ಚನೆ

ಮಂಡ್ಯ: ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆ ಹಿನ್ನಲೆ ಮಂಡ್ಯದ ಮದ್ದೂರಿನ ಚಾಮನಹಳ್ಳಿ ಗ್ರಾಮದ ರಾಮ ಮಂದಿರದಲ್ಲಿ ವಿಶೇಷ ಪೂಜೆ ಜರುಗಿತು.

ಬಿಜೆಪಿ ತಾಲ್ಲೂಕು ರೈತ ಮೋರ್ಚಾ ಅಧ್ಯಕ್ಷ ಸತೀಶ್ ನೇತೃತ್ವ ವಹಿಸಿದ್ದು, ಅಭಿಷೇಕ ಹಾಗೂ ಅರ್ಚನೆ ಮೂಲಕ ರಾಮನಿಗೆ ಪೂಜೆ ಸಲ್ಲಿಸಿ 2 ಸಾವಿರ ಲಡ್ಡು ವಿತರಿಸಿದರು.

ಮಂಡ್ಯ ನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಜಿಲ್ಲಾದ್ಯಂತ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ಯಾವುದೇ ಸಂಭ್ರಮ ಸಡಗರ ಮಾಡದಂತೆ ಈಗಾಗಲೇ ಜಿಲ್ಲಾಡಳಿತ ನಿಬರ್ಂಧ ಹೇರಲಾಗಿದೆ.

Related