ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ರಾಯಚೂರು : ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ಏನು ಅಭಿವೃದ್ಧಿ ಮಾಡಿದೆ? ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಮ್ಮ ಅಭ್ಯರ್ಥಿ ಬಗ್ಗೆ ಮತದಾರರಲ್ಲಿ ಸಿಂಪಥಿ ಇದೆ. ನಾವು ಮಸ್ಕಿಯಲ್ಲಿ ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ಏನು ಅಭಿವೃದ್ಧಿ ಮಾಡಿದೆ? 7ಕೆಜಿ ಅಕ್ಕಿ ಇರುವುದು 5 ಕೆಜಿ ಅಕ್ಕಿ ಮಾಡಿದ್ದು ಅಭಿವೃದ್ಧಿನಾ? 5(ಎ) ಕೆನಾಲ್ ಮಾಡದೇ ಇರುವುದು ಅಭಿವೃದ್ಧಿನಾ? ರಸ್ತೆಗಳಿಗೆ ದುಡ್ಡು ಕೊಡದೇ ಇರುವುದು ಅಭಿವೃದ್ಧಿನಾ? ಮನೆಗಳಿಗೆ ದುಡ್ಡು ಕೊಡದೇ ಇರುವುದು ಅಭಿವೃದ್ಧಿನಾ? ಜನರು ಸುಳ್ಳು ಭರವಸೆ ನಂಬಿ ವೋಟು ಹಾಕಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

Related