ಸಿದ್ದರಾಮಯ್ಯ ಮತಿಭ್ರಮಣೆ : ಸಚಿವ ಆರೋಪ

ಸಿದ್ದರಾಮಯ್ಯ ಮತಿಭ್ರಮಣೆ : ಸಚಿವ ಆರೋಪ

ಚಿತ್ರದುರ್ಗ : ಅಧಿಕಾರ ಕಳೆದುಕೊಂಡು ಸಿದ್ದರಾಮಯ್ಯ ಮತಿಭ್ರಮಣೆಯಾಗಿದೆ. ಹಾಗಾಗಿ ಬಾಯಿಗೆ  ಬಂದಂತೆ  ಮಾತನಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜಕೀಯ ಅಸ್ತಿತ್ವ ಮತ್ತು ಪುಕ್ಕಟ್ಟೆ ಪ್ರಚಾರಕ್ಕಾಗಿ ಮಾತನಾಡುತ್ತಿದ್ದರು ಎಂದು ಸಿದ್ದು ವಿರುದ್ಧ ಕಿಡಿಕಾರಿದರು.

ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಅನೈತಿಕ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ರೀತಿ ಹೇಳುವ ಮೂಲಕ ಮೇಷ್ಟ್ರಾಗಲು ಹೊರಟಿದ್ದಾರೆ. ನಮ್ಮನ್ನು ಟೀಕಿಸಲು ಅವರಿಗೆ ನೈತಿಕತೆ ಇರಬೇಕು ಎಂದರು.

ಚುನಾವಣೆಯಲ್ಲಿ ಬೆಂಬಲ ನೀಡುವುದಾಗಿ ಹೇಳಿ ದೇವೇಗೌಡರನ್ನು ಸೋಲಿಸಿದ ಮನುಷ್ಯ ಸಿದ್ದರಾಮಯ್ಯ. ಕುಮಾರಸ್ವಾಮಿ ಅವರನ್ನು ಸಿಎಂ ಕುರ್ಚಿಯಿಂದ ಇಳಿಸಿದವರು ನೈತಿಕತೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಪಕ್ಷದ ಮುಖ್ಯಸ್ಥರು, ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದು ಎಲ್ಲವನ್ನೂ ಚರ್ಚಿಸಲಿದ್ದು, ಸ್ಪಷ್ಟತೆ ಸಿಗಲಿದೆ ಎಂದರು.

Related