ಜನ ಸೇವಕ ಕಾರ್ಯಕ್ರಮಕ್ಕೆ ಚಾಲನೆ – ಶಾಸಕ ಸತೀಶ್ ರೆಡ್ಡಿ

ಜನ ಸೇವಕ ಕಾರ್ಯಕ್ರಮಕ್ಕೆ ಚಾಲನೆ – ಶಾಸಕ ಸತೀಶ್ ರೆಡ್ಡಿ

ಆನೇಕಲ್ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ಜನ ಸೇವಕ ಅಭಿಯಾನವನ್ನು ಮನೆ ಮನೆಗೆ ತಲುಪಿಸುವಂತಹ ಉದ್ದೇಶದಿಂದ ರಾಜ್ಯಾದ್ಯಂತ ಜನ ಸೇವಕ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸತೀಶ್ ರೆಡ್ಡಿ ತಿಳಿಸಿದರು.

ಈ ವೇಳೆ ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಜನ ಸೇವಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಸತೀಶ್ ರೆಡ್ಡಿ, ಕಳೆದ 2019ರಿಂದಲೂ ಸಹ ಜನರಿಗೆ ಸಹಾಯವಾಗುವ ದೃಷ್ಟಿಯಿಂದ ಜನ ಸೇವಕ ಎನ್ನುವಂತಹ ಉತ್ತಮವಾದ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಇದರಿಂದ ಹೆಚ್ಚು ಜನರಿಗೆ ಸೇವೆ ಸಲ್ಲಿಸುವಂತಹ ಕೆಲಸವಾಗಿದೆ ಜೊತೆಗೆ ಕೊರೋನಾ ಸಂಧರ್ಭದಲ್ಲಿಯೂ ಸಹ ಜನ ಸಾಮಾನ್ಯರಿಗಿ ನೆರವಾಗಿದೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ, ಎಲೆಕ್ಟ್ರಿಕ್ ಬಿಲ್ ಪಾವತಿ ಹಲವು ಸೇರಿದಂತೆ ಸೇವೆಗಳನ್ನು  ಒಳಗೊಂಡಂತೆ ಜನರಿಗೆ ಸಹಾಯವಾಗುವ ದೃಷ್ಟಿಯಿಂದ ಜನರ ಮನೆ ಮನೆ ಬಾಗಿಲಿಗೆ ತೆರಳಿ ಅದಕ್ಕೆ ಬೇಕಾದ ದಾಖಲಾತಿಗಳನ್ನು ತೆಗೆದುಕೊಂಡು  ಸಂಬಂಧ  ಪಟ್ಟ ಇಲಾಖೆಗಳಿಗೆ ತೆರಳಿ ಸೇವೆಗಳನ್ನು ಜನರಿಗೆ ಒದಗಿಸಲಾಗುತ್ತಿದೆ ಎಂದು ಜನ ಸೇವಕ ಕಾರ್ಯಕ್ರಮವನ್ನು ಬೊಮ್ಮನಹಳ್ಳಿ ಕ್ಷೇತ್ರದ ಪ್ರತಿ ಭಾಗದಲ್ಲಿಯೂ ಸಹ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

Related