ರವಿಪೂಜಾರಿ ಭಂಟ ಹೆಜ್ಮಾಡಿ ಗುಲಾಮ್ ಬಿಡುಗಡೆ

ರವಿಪೂಜಾರಿ ಭಂಟ ಹೆಜ್ಮಾಡಿ ಗುಲಾಮ್ ಬಿಡುಗಡೆ

ಬೆಂಗಳೂರು: ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ರವಿಪೂಜಾರಿ ಭಂಟ ಹೆಜ್ಮಾಡಿ ಗುಲಾಮ್ ಜಾಮೀನು ಪಡೆದು ಬಿಡುಗಡೆ ಆಗಿದ್ದಾರೆ.

ಪ್ರಕರಣದಲ್ಲಿ ಹೆಜ್ಮಾಡಿ ಗುಲಾಮ್ ಸಿ.ಸಿ.ಬಿ. ದುರುದ್ದೇಶದಿಂದ ಸಿಕ್ಕಿ ಹಾಕಿsಸಲಾಗಿತ್ತು. ಕರ್ನಾಟಕ ಶಾಸಕರೊಬ್ಬರ ಹೆಂಡತಿಯ ಸಾವು ಮತ್ತು ಯುವ ವಕೀಲ ನೌಶಾದ್ ಸಾವಿನ ವಿಚಾರದಲ್ಲಿ ಬಾಯಿ ಮುಚ್ಚಿಸುವ ಭಾಗವಾಗಿ ಈ ಪ್ರಕರಣಕ್ಕೆ ಅವರನ್ನು ಸಿಲುಕಿಸಲಾಗಿದೆ ಎಂದು ಅವರ ಪರ ನ್ಯಾಯವಾದಿ ಬಿ.ಟಿ.ವಿಶ್ವನಾಥ್ ನ್ಯಾಯಾಲಯದಲ್ಲಿ ವಾದಿಸಿದ್ದರು

ಇಲಾಖೆಯೊಳಗಿನ ಪೊಲೀಸ್ ಅಧಿಕಾರಿಗಳ ನಡುವಿನ ಶೀತಲ ಸಮರ ಕೂಡ ಗುಲಾಮ್ ನನ್ನು ವಿನಃ ಕಾರಣ ಬಂಧಿಸಲು ಕಾರಣವಾಗಿದೆ ಎಂದು ಕೂಡ ಅವರ ವಕೀಲರು ವಾದಿಸಿದ್ದರು.

ಉಡುಪಿಯ ಗುಲಾಮ್ ಮಹಮ್ಮದ್ ನೀಡಿದ ಮಾಹಿತಿಯಿಂದ ರಾಜ್ಯ ಪೊಲೀಸ್ ಅನೇಕ ಭೂಗತ ಪಾತಕಿಗಳನ್ನು ಹಿಡಿಯಲು ಸಾಧ್ಯವಾಗಿದ್ದನ್ನು ಸ್ಮರಿಸಬಹುದು. 2 ಬಾರಿ ಗುಲಾಮ್ ಮೇಲೆ ಭೂಗತಪಾತಕಿಗಳಿಂದ ಕೊಲೆ ಪ್ರಯತ್ನ ನಡೆದಿತ್ತು ಎಂದು ಕೂಡ ಅವರ ವಕೀಲರು ವಾದಿಸಿದ್ದರು.

Related