ಸೂಲಿಬೆಲೆ, ಮಾ. 30: ಸೂಲಿಬೆಲೆ ಪಟ್ಟಣದಲ್ಲಿ ಸಂತೆ ಮೈದಾನದಲ್ಲಿ ಜನರು ತರಕಾರಿ ಕೊಳ್ಳಲು ಮುಗಿಬಿದ್ದರು. ನಿಷೇಧಾಜ್ಞೆ ಮತ್ತು ಸಾಮಾಜಿಕ ಅಂತರ ಉಲ್ಲಂಘನೆ ಯಾಗುತ್ತಿರುವುದು ಕಂಡು ಕಂದಾಯ, ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆಯವರು ಜನರನ್ನು ಚದುರಿಸಿದರು.
ಕೋವಿಡ್-19 ರೋಗ ಹರಡದಂತೆ ತಡೆಗಟ್ಟಲು ಸರ್ಕಾರ ಮತ್ತು ಸ್ಥಳೀಯ ಆಡಳಿತ ತೆಗೆದುಕೊಳ್ಳುವ ನಿರ್ಧಾರ ಮತ್ತು ಕ್ರಮಗಳು ಸಾರ್ವಜನಿಕರ ಸಹಕಾರ ಇಲ್ಲದಿರುವುದರಿಂದ ಅರ್ಥಹೀನವಾಗುತ್ತಿವೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ಸೂಲಿಬೆಲೆ ಪಟ್ಟಣದಲ್ಲಿ ತರಕಾರಿಯನ್ನು ಕೊಳ್ಳಲು ಸೇರಿದ ಜನ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ತರಕಾರಿ ಕೊಳ್ಳಲು ಮುಗಿಬಿದ್ದರು. ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಸಾರ್ವಜನಿಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದರು. ವರ್ತಕರು ಇದರ ಜವಾಬ್ದಾರಿ ವಹಿಸಬೇಕು ಎಂದು ನಿದರ್ಶನ ನೀಡಲಾಗಿದ್ದರೂ ಯಾರು ಪಾಲನೆ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.