ಬಿಜೆಪಿ ವಿರುದ್ಧ ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

ಬಿಜೆಪಿ ವಿರುದ್ಧ ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

ಬೆಂಗಳೂರು, ಸೆ. 7: ಗೇಮ್ ಚೇಂಜರ್ಸ್ ಅಂತ ಜನರನ್ನು ನಂಬಿಸುತ್ತಾ ಅಧಿಕಾರಕ್ಕೆ ಬಂದವರು ನೇಮ್ ಚೇಂಜ್ ಮಾಡುತ್ತಿದ್ದಾರೆ,ಬಿಜೆಪಿ ಮತ್ತು ಆರ್ ಎಸ್ ಎಸ್ ನವರಿಗೆ ಭಾರತ ಇತಿಹಾಸದ ಬಗ್ಗೆ ಗೊತ್ತಿದೆಯಾ? ಇಂಡಿಯಾ ಮತ್ತು ಹೆಸರುಗಳನ್ನು ಚೇಂಜ್ ಮಾಡುವ ಬದಲು ಅವರು ಜನರ ಹಣೆಬರಹ ಚೇಂಜ್ ಮಾಡಲಿ ಎಂದರು. ಭಾರತ್ ಅಂತ ಹೆಸರು ಯಾಕೆ ಬಂತು ಅನ್ನೋದು ಅವರಿಗೆ ಗೊತ್ತಿದೆಯಾ?
ಈಗಲೂ ಶೇಕಡ 74ರಷ್ಟು ಭಾರತೀಯರಿಗೆ ಪೌಷ್ಟಿಕ ಆಹಾರ ಸಿಗುತ್ತ್ತಿಲ್ಲ ಅಂತ ಸರ್ಕಾರದ ವರದಿಯೇ ಹೇಳುತ್ತದೆ, ಮೊದಲು ಆ ಸ್ಥಿತಿಯನ್ನು ಬಿಜೆಪಿ ಸರ್ಕಾರ ಚೇಂಜ್ ಮಾಡಲಿ ಅಂತ ಖರ್ಗೆ ಹೇಳಿದರು. ಅಖಂಡ ಭಾರತ ಅಂತ ಬಿಜೆಪಿ ಅಂತ ಹೇಳುತ್ತದೆ, ಅದರೆ ಅರುಣಾಚಲ ಪ್ರದೇಶದಲ್ಲಿ ಚೀನಾ ನಮ್ಮ ಹಳ್ಳಿಗಳನ್ನು ಅತಿಕ್ರಮಿಸಿಕೊಳ್ಳುತ್ತಿದೆ, ಅದನ್ನು ಚೇಂಜ್ ಮಾಡಲಿ ಎಂದು ಖರ್ಗೆ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.

Related