ಗುಣಮುಖರಾಗಲೆಂದು ವಿವಿಧ ಕ್ಷೇತ್ರಗಳಲ್ಲಿ ಪ್ರಾರ್ಥನೆ

ಗುಣಮುಖರಾಗಲೆಂದು ವಿವಿಧ ಕ್ಷೇತ್ರಗಳಲ್ಲಿ ಪ್ರಾರ್ಥನೆ

ಸಿರುಗುಪ್ಪ : ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಕೋವಿಡ್-19 ಗೆದ್ದು ಬರಲೆಂದು ಮಾಜಿ ಶಾಸಕ ಬಿ. ಎಂ ನಾಗರಾಜ್ ರವರು ಹಲವು ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಕಳೆದ ನಾಲ್ಕು ತಿಂಗಳಿಂದ ಸಿದ್ದರಾಮಯ್ಯನವರು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಜನರಿಗೆ ಉತ್ತಮ ಚಿಕಿತ್ಸೆ ದೊರೆಯುವಂತೆ ರಾಜ್ಯ ಸರ್ಕಾರದ ಜೊತೆ ಸಂಪರ್ಕ ಹೊಂದಿ ಶ್ರಮಿಸುತ್ತಿದ್ದಾರೆ. ಅವರು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು.

ಇದೇ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೇಸ ಅಧ್ಯಕ್ಷ ಕರಿಬಸಪ್ಪ, ನಗರಸಭೆ ಸದಸ್ಯರಾದ ಕಾಯಿಪಲ್ಲೆ ನಾಗರಾಜ, ಮಹೇಶ್ ಗೌಡ, ಡಿ. ನಾಗರಾಜ, ಮೋದಿನ್ ಮಹಮ್ಮದ್ ನೂರುಲಾ ,ಕೋಟಿರೆಡ್ಡಿ ಇನ್ನು ಮುಂತಾದ ಕಾಂಗ್ರೆಸ್ ಮುಖಂಡರು ಇದ್ದರು.

Related