ಪ್ರತಾಪ್ ಸಿಂಹಗೆ ಸೋಲುವ ಭಯ ಕಾಡುತ್ತಿದೆ: ಸಿಎಂ

ಪ್ರತಾಪ್ ಸಿಂಹಗೆ ಸೋಲುವ ಭಯ ಕಾಡುತ್ತಿದೆ: ಸಿಎಂ

ರಾಯಚೂರು: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಪ್ರತಾಪ್ ಸಿಂಹಗೆ ಸೋಲುತ್ತೇನೆ ಎಂಬುವ ಭಯ ಕಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಮೈಸೂರು ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದವರು ಅತಿ ಹೆಚ್ಚು ಬಲಿಷ್ಠವಾಗಿದ್ದಾರೆ ಆದ್ದರಿಂದ ಪ್ರತಾಪ್ ಸಿಂಹಾಗೆ ಈ ಬಾರಿ ಸೋಲುತ್ತೇನೆ ಎಂಬ ಭಯ ಕಾಡುತ್ತಿದೆ ಎಂದು ಪ್ರತಾಪ್ ಸಿಂಹಗೆ ಟಾಂಗ್ ಕೊಟ್ಟಿದ್ದಾರೆ.

ಇನ್ನು ಟಿಕೆಟ್ ವಿಚಾರದ ಬಗ್ಗೆ ಯತೀಂದ್ರ ಹೇಳಿಲ್ಲ, ನಾನೂ ಹೇಳಿಲ್ಲ. ಸಚಿವ ಭೈರತಿ ಸುರೇಶ್ ಅಲ್ಲಿ ವೀಕ್ಷಕರಾಗಿ ಹೋಗಿದ್ದರು. ಅವರ ವರದಿ ಆಧಾರದಲ್ಲಿ ತೀರ್ಮಾನ ತೆಗೆದುಕೊಳುತ್ತೇನೆ ಎಂದು ಹೇಳಿದ್ದಾರೆ.

ಕ್ಷೇತ್ರದಲ್ಲಿನ ಎಂಎಲ್​ಎಗಳು, ಎಕ್ಸ್​ಎಂಎಲ್​ಎಗಳು, ಎಂಪಿಗಳು, ಬ್ಲಾಕ್ ಕಮಿಟಿ ಅಧ್ಯಕ್ಷರು, ಅಭ್ಯರ್ಥಿಗಳಾಗಿದ್ದೋರು, ಜಿಲ್ಲಾ ಅಧ್ಯಕ್ಷರುಗಳು ಪ್ರಮುಖ ನಾಯಕರು ಅಭಿಪ್ರಾಯ ಮಾಡಲಾಗುತ್ತೆ. ಅವರು ಸೂಚಿಸುವವರಿಗೆ ಟಿಕೆಟ್ ಕೊಡುತ್ತೇವೆ ಎಂದಿದ್ದಾರೆ.

 

Related