ಪ್ರಜಾವಾಹಿನಿ ವರದಿಗೆ ಸ್ಪಂದಿಸಿದ ಹೊಸಪೇಟೆ ನಗರ ಸಭೆ ಅಧಿಕಾರಿಗಳು  

  • In State
  • October 28, 2023
  • 154 Views
ಪ್ರಜಾವಾಹಿನಿ ವರದಿಗೆ ಸ್ಪಂದಿಸಿದ ಹೊಸಪೇಟೆ ನಗರ ಸಭೆ ಅಧಿಕಾರಿಗಳು  

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ನಗರಸಭೆ ವ್ಯಾಪ್ತಿಗೆ ಬರುವ 22ನೇ ವಾರ್ಡಿನ ಗವಿಸಿದ್ದೇಶ್ವರ ವಾರ್ಡಿನಲ್ಲಿ ಒಳಚರಂಡಿಗಳು ತುಂಬಿ ಮಲ ಮತ್ತು ಚರಂಡಿ ನೀರು ರಸ್ತೆ ತುಂಬಾ ಹರಿಯುವುದಲ್ಲದೆ ಮನೆ ಬಾಗಿಲಿಗೆ ಬರುತ್ತದೆ. ಈ ದುರ್ವಾಸನೆಯಿಂದ ನಮಗೆ ಊಟ ಸಹ ಸೇರುವುದಿಲ್ಲ ಎಂದು ಮತ್ತು ಪಕ್ಕದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಾರಿ ಶಾಲೆ ಮಕ್ಕಳಿಗೂ ತಿರುಗಾಡಲು ಕೂಡ ಅಸ್ತವ್ಯಸ್ತವಾಗಿರುವುದರಿಂದ ಜನ ರೋಸಿ ಹೋಗಿ ಅಧಿಕಾರಿಗಳಿಗೆ ಮತ್ತು ಆ ವಾರ್ಡಿನ ಸದಸ್ಯರಿಗೂ ಎಷ್ಟೇ ಬಾರಿ ತಿಳಿಸಿದರು ಏನು ಪ್ರಯೋಜನವಾಗದ ಹಿನ್ನೆಲೆಯಲ್ಲಿ ಪ್ರಜಾವಾಹಿನಿಗೆ ದೂರು ನೀಡಿದ ಮೇರೆಗೆ ಪ್ರಜಾವಾಹಿನಿಯಲ್ಲಿ ದಿನಾಂಕ 26 ರಂದು “ಮನೆ ಮನೆಗೆ ಚರಂಡಿ ನೀರು” ಎನ್ನುವ ಶೀರ್ಷಿಕೆಯೊಂದಿಗೆ ಸುದ್ದಿ ಪ್ರಕಟವಾಗಿತ್ತು.

ಈ ಸಂಬಂಧ ನಗರಸಭೆಯ ಕಮಿಷನರ್ ಮತ್ತು ಇಂಜಿನಿಯರ್ ತೇಜಸ್ವಿನಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ದಿಢೀರನೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ ಚರಂಡಿ ಪೈಪುಗಳ ಕನೆಕ್ಷನ್ ಜೋಡಿಸಿ ಅಲ್ಲಿನ ಸಮಸ್ಯೆಯನ್ನು ಬಗೆಹರಿಸಿದ್ದಾರೆ.

ಈ ನಿಟ್ಟಿನಲ್ಲಿ ನಗರದ ಜನ ಪ್ರಜಾವಾಹಿನಿ ಪತ್ರಿಕೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

( ವರದಿಗಾರ, ಎ ಚಿದಾನಂದ, ವಿಜಯನಗರ)

 

 

 

 

 

Related