ನಮೂನೆ 3 ನೀಡಲು ಅಧಿಕಾರಿಗಳೇ ಮನೆ ಬಾಗಿಲಿಗೆ

  • In State
  • November 8, 2023
  • 146 Views
ನಮೂನೆ 3 ನೀಡಲು ಅಧಿಕಾರಿಗಳೇ ಮನೆ ಬಾಗಿಲಿಗೆ

ಹೊಸಪೇಟೆ ನಗರದ ಕಮಲಾಪುರದ ಪುರಸಭೆಯಿಂದ ಮನಬಾಗಿಲಿಗೆ ಫಾರಂ ನಂ 3 ಪುರಸಭೆ ಮುಖ್ಯ ಅಧಿಕಾರಿ ಹಾಗೂ ಕಂದಾಯ ಅಧಿಕಾರಿಗಳು ವಿತರಣೆ ಮಾಡಿದರು.

ವಿಜಯನಗರ ಜಿಲ್ಲಾಧಿಕಾರಿಗಳಾದ ಎಂ ಎಸ್ ದಿವಾಕರ್ ಇವರ ಆದೇಶದ ಮೇರೆಗೆ ಕಮಲಾಪುರದ ಡಾ. ಬಿಆರ್ ಅಂಬೇಡ್ಕರ್ ನಗರದಲ್ಲಿ ಮತ್ತು ಊರಿನ ಕೆಲ ವಾರ್ಡ್ ಗಳಲ್ಲಿ ಪುರಸಭೆ ಅಧಿಕಾರಿಗಳು ಹಾಗೂ ಮುಖ್ಯ ಅಧಿಕಾರಿ ಮಹಾಂತೇಶ್ ಬಿಳಗಿ ಆಸ್ತಿದಾರರಿಗೆ ನಮೂನೆ 3 ಯನ್ನು ನೀಡಿದರು.

ಈ ಸಂಬಂಧ ಫಲಾನುಭವಿಗಳು ಸಂತಸ ವ್ಯಕ್ತಪಡಿಸುವ ಮೂಲಕ ಜಿಲ್ಲಾಧಿಕಾರಿಯನ್ನು ಹೊಗಳಿದರು. ಆಸ್ತಿ ದಾಖಲಾತಿಗಳು ಎಲ್ಲಾ ಸರಿಯಾಗಿದ್ದರೂ ಕೂಡ ತಿಂಗಳಗಟ್ಟಲೆ ಫಾರಂ ನಂ 3 ಗಾಗಿ ಕಚೇರಿಗೆ ತಿರುಗಿದರು ಕೂಡ ಕೆಲ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದರು, ಆದರೆ ಈಗ ಮನೆ ಬಾಗಿಲಿಗೆ ನಮೂನೆ -3 ಯನ್ನು ಅಧಿಕಾರಿಗಳು ಬಂದು ನೀಡುತ್ತಿರುವುದು ಖುಷಿ ತಂದಿದೆ ಎಂದರು.

ಫಾರಂ ನಂಬರ್ 3 ನೀಡುವ ಸಂದರ್ಭದಲ್ಲಿ ಪುರಸಭೆ ಅಧಿಕಾರಿ ಮಾಂತೇಶ್ ಬಿಳಗಿ ಮತ್ತು ಕಂದಾಯ ಅಧಿಕಾರಿಗಳು ಕೆಲವು ಮುಖಂಡರು ಇದ್ದರು.

ವರದಿಗಾರ,ಎ ಚಿದಾನಂದ,ವಿಜಯನಗರ.

Related