ಈದ್ ಮಿಲಾದ ಸರಳ ಆಚರಣೆಗೆ ಸೂಚನೆ

ಈದ್ ಮಿಲಾದ ಸರಳ ಆಚರಣೆಗೆ ಸೂಚನೆ

ಗಜೇಂದ್ರಗಡ : ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಪ್ ಇಲಾಖೆಯ ಮಾರ್ಗಸೂಚಿ ಅನ್ವಯ ಕೊವೀಡ್-19 ಹಿನ್ನಲೆಯಲ್ಲಿ ಈ ಭಾರಿ ಯಾವುದೇ ಸಭೆ ಸಮಾರಂಭಗಳಿಲ್ಲದೆ, ಅ.30ರಂದು ಈದ್ ಮಿಲಾದ ಆಚರಿಸುವಂತೆ ನಿರ್ದೇಶನ ಪಾಲನೆ ಮಾಡುವಂತೆ ಎಎಸ್ಐ ಹೆಚ್ಎಲ್ ಬಜಂತ್ರಿ ತಿಳಿಸಿದರು.

ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ ಹಬ್ಬದ ಅಂಗವಾಗಿ ಶಾಂತಿ ಸಭೆಯಲ್ಲಿ ಮಾತನಾಡಿ, ಈ ವರ್ಷ ಯಾವುದೇ ಮೆರವಣಿಗೆಯಿಲ್ಲದೆ ಸರ್ಕಾರದ ಮಾರ್ಗಸೂಚಿಯನ್ನೊಳಗೊಂಡತೆ, ಸುರಕ್ಷತಾ ಕ್ರಮಗಳನ್ನು ಕೈಗೊಂಡು ಆಚರಿಸುವಂತೆ ಸಮಾಜ ಮುಸ್ಲಿಂ ಭಾಂದವರಿಗೆ ತಿಳಿಸಿದರು.

ದಾದಾಖಲಂದರ ಆಶೇಖಾನ, ಶರಣಪ್ಪ ಬಜಂತ್ರಿ, ಎ.ಡಿ. ಕೋಲಕಾರ, ರಾಜು ಸಾಂಗ್ಲಿಕರ, ಫಯಾಜ ತೋಟದ, ಮುರ್ತುಜಾಸಾಬ ಮುಜಾವರ, ಇಮಾಮಸಾಬ ಬಾಗವಾನ, ಎಮ್.ಕೆ.ತಟಗಾರ, ಅಶೋಕ ಗಾರ್ಗಿ, ರಾಮಪ್ಪ ಗಟರಡ್ಡಿಹಾಳ ಸಭೆಯಲ್ಲಿದ್ದರು.

Related