ಬೆಂಗಳೂರು : ಬೃಹತ್ ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭವೃದ್ಧಿ ಸಂಘದ ಸಭಾಂಗಣಕ್ಕೆ ಸ್ವಾಮಿ ವಿವೇಕಾನಂದ ಹೆಸರು ಹಾಗೂ ನೌಕರರ ಭವನದ ಹಿಂದಿರುವ ಉದ್ಯಾನವನಕ್ಕೆ ಅಧಿಕಾರಿ ನೌಕರರ ಉದ್ಯಾನವನ ಎಂದು ನಾಮಕರಣ ಮಾಡುವ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ರಾಮ್ ಮೋಹನ್ ರಾಜು ಸಿ.ಆರ್ (ಉಪ ಮಹಾಪೌರರು), ಶ್ರೀ ಮಂಜುನಾಥ ಪ್ರಸಾದ್ (ಮಾನ್ಯ ಆಯುಕ್ತರು), ಶ್ರೀ ಅಬ್ದುಲ್ ವಾಜಿದ್ ಮಾನ್ಯ ವಿರೋಧ ಪಕ್ಷದ ನಾಯಕರು, ಬಿಬಿಎಂಪಿ, ಶ್ರೀಮತಿ ಉಮಾದೇವಿ ನಾಗರಾಜ್ (ಅದ್ಯಕ್ಷರು, ತೋಟಗಾರಿಕೆ ಸಮಿತಿ), ಪಾಲಿಕೆಯ ಇತರೆ ಸದಸ್ಯರು ಹಾಗೂ ಸಂಘದ ಪದಾಧಿಕಾರಿಗಳು ಹಾಜರಿದ್ದರು.