ಕಾಲಾಪತ್ಥರ್‌ನಲ್ಲಿ ಮೈಸೂರು ಬೆಡಗಿ ಅಪೂರ್ವ

ಕಾಲಾಪತ್ಥರ್‌ನಲ್ಲಿ ಮೈಸೂರು ಬೆಡಗಿ ಅಪೂರ್ವ

ಫಸ್ಟ್ ಲುಕ್ ಮತ್ತು ಪೋಸ್ಟರ್ ಮೂಲಕವೇ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿರುವ ‘ಕಾಲಾಪತ್ಥರ್’ ಸಿನಿಮಾದಲ್ಲಿ ಮೈಸೂರು ಬೆಡಗಿ ಅಪೂರ್ವಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ರವಿಚಂದ್ರನ್ ಅವರ ‘ಅಪೂರ್ವ’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದ್ದ ಅವರಿಗೆ ಇದು ನಾಲ್ಕನೇ ಸಿನಿಮಾವಾಗಿದೆ. ಇದರಲ್ಲಿ ಅವರ ಪಾತ್ರ ವಿಭಿನ್ನವಾಗಿರುವ ಕಾರಣಕ್ಕೆ ಅವರು ಈ ಸಿನಿಮಾ ಒಪ್ಪಿಕೊಂಡಿದ್ದಾರಂತೆ.

ಈ ಚಿತ್ರಕ್ಕೆ ‘ಕೆಂಡಸಂಪಿಗೆ’ ಖ್ಯಾತಿಯ ವಿಕ್ಕಿ ವರುಣ್ ನಾಯಕ. ನಿರ್ದೇಶಕರು ಕಥೆಯನ್ನು ವಿವರಿಸಿದಾಗ ಈ ಚಿತ್ರದಲ್ಲಿ ಒಂದು ವಿಭಿನ್ನವಾದ ಅಂಶ ಇದೆ ಎಂದು ನನಗೆ ಅನಿಸಿತು. ನನ್ನ ಪಾತ್ರವೇ ಈ ಚಿತ್ರದ ಒಂದು ವಿಶೇಷ ಅಂಶ ಎನ್ನಬಹುದು. ಇದುವರೆಗೆ ನಾನು ನಿರ್ವಹಿಸಿರುವುದಕ್ಕಿಂತಲೂ ಕೊಂಚ ಪ್ರಬುದ್ಧವಾದ ಪಾತ್ರ ಇದಾಗಿದೆ. ಶಿಕ್ಷಕಿ ರೀತಿಯ ಪಾತ್ರ ಎನ್ನಬಹುದು. ವಿಕ್ಕಿ ಅವರ ‘ಕಾಲೇಜ್ ಕುಮಾರ್’, ‘ಕೆಂಡಸಂಪಿಗೆ’ ಸಿನಿಮಾಗಳನ್ನು ನೋಡಿದ್ದೇನೆ. ಅವೆರಡು ಬಿಡುಗಡೆಯಾದಾಗ ನಾನು ಕಾಲೇಜಿನಲ್ಲಿ ಓದುತ್ತಿದ್ದೆ. ಈಗ ಅವರ ಜತೆ ನಾಯಕಿಯಾಗಿ ನಟಿಸಲಿದ್ದೇನೆ. ಇದೊಂದು ರೀತಿಯಲ್ಲಿ ಖುಷಿಯ ವಿಚಾರ ಎಂದಿದ್ದಾರೆ.

ಅಪೂರ್ವಾ. ಒಂದಷ್ಟು ಸಿನಿಮಾ ಕಥೆಗಳನ್ನು ಕೇಳಿದ್ದೇನೆ. ಆ ಪೈಕಿ ‘ಕಾಲಾ ಪತ್ಥರ್’ ಇಷ್ಟವಾದ ಕಾರಣ ಒಪ್ಪಿಕೊಂಡೆ ಎಂದಿರುವ ಅಪೂರ್ವಾ, ‘ನನಗೆ ಹೆಚ್ಚೆಚ್ಚು ಸಿನಿಮಾದಲ್ಲಿ ನಟಿಸುವುದಕ್ಕಿಂತಲೂ ಒಳ್ಳೆಯ ಸಿನಿಮಾದಲ್ಲಿ ನಾಯಕಿಯಾಗಬೇಕು ಎಂಬ ಆಸೆ ಇದೆ. ಜತೆಗೆ ಸಿನಿಮಾ ತಂಡವನ್ನು ನೋಡುತ್ತೇನೆ. ಅದು ‘ಕಾಲಾಪತ್ಥರ್’ ಆಗಿರಬಹುದು, ‘ಕೃಷ್ಣ ಟಾಕೀಸ್’ ಆಗಿರಬಹುದು, ಎಲ್ಲದರಲ್ಲಿಯೂ ನಾಯಕ, ಕಥೆ, ನಿರ್ದೇಶಕರು ಇತ್ಯಾದಿಗಳನ್ನು ನೋಡಿಕೊಂಡೇ ಒಪ್ಪಿಕೊಂಡಿದ್ದೇನೆ ಎಂದಿದ್ದಾರೆ.

Related