ಪ್ಯಾರೀಸ್ ರೀತಿ ಪ್ರವಾಸಿಗರನ್ನ ಸೆಳೆಯುವ ಶಕ್ತಿ ಮೈಸೂರಿಗಿದೆ ಎಂದರು ಮೋದಿ : ಪ್ರತಾಪ್ ಸಿಂಹ

ಮೈಸೂರು: ಮೈಸೂರನ್ನ ಪ್ಯಾರೀಸ್ ಮಾಡ್ತೀವಿ ಅಂತ ಮೋದಿ ಹೇಳಿಲ್ಲ. ಪ್ಯಾರೀಸ್ ರೀತಿ ಪ್ರವಾಸಿಗರನ್ನ ಸೆಳೆಯುವ ಶಕ್ತಿ ಮೈಸೂರಿಗಿದೆ ಎಂದು ಹೇಳಿದ್ರು ಎಂದು ಸಂಸದ ಪ್ರತಾಪ್ಸಿಂಹ ಸ್ಪಷ್ಟನೆ ನೀಡಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಸೋದ್ಯಮವನ್ನ ಅಭಿವೃದ್ದಿ ಮಾಡಲು ಮೂಲಸೌಕರ್ಯ ನೀಡುತ್ತಿದ್ದಾರೆ. ಏರ್ಪೋರ್ಟ್, ಎಕ್ಸ್ಪ್ರೆಸ್ಹೈವೇ ಇವೆಲ್ಲ ಕೊಟ್ಟಿದ್ದಾರೆ. ರಾಜಕಾರಣಿಗಳ ರೀತಿ ನೀವು ಮಾತನಾಡಬೇಡಿ ಎಂದು ಮಾಧ್ಯಮದವರ ವಿರುದ್ದ ಗರಂ ಆದರು.

ಸಚಿವ ಎಸ್.ಟಿ.ಸೋಮಶೇಖರ್ ಮಾತನಮಾಡಿ, ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಇನ್ನು ಸ್ಥಳ ನಿಗದಿಯಾಗಿಲ್ಲ. ಮುಂದಿನ ದಿನಗಳಲ್ಲಿ ಚರ್ಚೆ ಮಾಡಿ ಸ್ಥಳದ ಬಗ್ಗೆ ನಿರ್ಧಾರ ಮಾಡಲಾಗುವುದು. ಈಗಾಗಲೇ ಈ ಬಗ್ಗೆ ಸಭೆ ನಡೆಸಲಾಗಿದೆ. ಈ ಬಗ್ಗೆ ಒಂದು ಸಮಿತಿ ಮಾಡಲಾಗುವುದು. ಸಮಿತಿಯಲ್ಲಿ ಚರ್ಚೆ ನಡೆಸಿ, ಎಲ್ಲಾ ನಿರ್ಧಾರ ಮಾಡಲಾಗುವುದು.

ಕೇಂದ್ರ ಸಚಿವ ಪ್ರಹ್ಲಾದ್​ ಜೋಷಿ ಮೈಸೂರಿಗೆ ಬರುತ್ತಾರೆ. ಅವರು ಸೇರಿದಂತೆ ಸಮಿತಿಯಲ್ಲಿ ಚರ್ಚೆ ಮಾಡಿ, ಸ್ಥಳ ನಿಗದಿ ಮಾಡುತ್ತೇವೆ. ಸಮಿತಿಯಲ್ಲಿ ಎಲ್ಲಾ ಪಕ್ಷದ ಶಾಸಕರು ಇರಲಿದ್ದಾರೆ. ಪರಿಷತ್ ಸದಸ್ಯರು, ಯೋಗ ಸಂಸ್ಥೆಯವರು ಇರಲಿದ್ದಾರೆ ಎಂದರು.

Related