ಬೆಂಗಳೂರು : ವಿಶ್ವ ಮೆಚ್ಚಿದ ನಾಯಕ, ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ರವರ 70ನೇ ವರ್ಷದ ಜನ್ಮದಿನದ ಪ್ರಯುಕ್ತವಾಗಿ ಸಚಿವರು ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ವಿ. ಸೋಮಣ್ಣ ರವರು ಇಂದು ಮಾರುತಿ ಮಂದಿರದಿಂದ ಸೈಕಲ್ ಜಾಥಾ ಮೂಲಕ ಗೋವಿಂದ ರಾಜನಗರ ವಾರ್ಡ್ ನಲ್ಲಿ ಇರುವ ಬಾಲಗಂಗಾಧರನಾಥ ಸ್ವಾಮೀಜಿ ಆಟದ ಮೈದಾನದಲ್ಲಿ ವಿಶೇಷವಾಗಿ 70 ಕೆಜಿ ತೂಕದ ಬ್ರುಹತ್ ಲಡ್ಡು ತಯಾರಿಸಲಾಗಿದೆ.
ಕಾರ್ಯಕ್ರಮ ಹಾಗೂ 70 ಜನ ಪೌರ ಕಾರ್ಮಿಕರಿಗೆ ಹಾಗೂ ನಿವೃತ್ತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯ ಯುವಮೋರ್ಚಾ ಉಪಾಧ್ಯಕ್ಷರಾದ ಅರುಣ್ ಸೋಮಣ್ಣ ರವರು, ಬಿಬಿಎಂಪಿ ಎಲ್ಲಾ ಮಾಜಿ ಸದಸ್ಯರು ಮುಖಂಡರು ಭಾಗವಹಿಸಲಿದ್ದಾರೆ.