ಶಹಾಪುರ:ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಸಾವಿತ್ರೀಬಾಯಿ ಪುಲೆ ಶಿಕ್ಷಕಿಯರ ಸಂಘ ವತಿಯಿಂದ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ರಾಯಪ್ಪಗೌಡ ಹುಡೇದ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘದ ಅಧ್ಯಕ್ಷೇ ಗೀತಾಜಂಲಿ ಮಾತಾನಾಡಿ ಸಾಂವಿಧಾನಿಕವಾಗಿ ಮಹಿಳೆಯರ ಅಭಿವೃದ್ಧಿಯ ಸಲುವಾಗಿ ಸಂವಿಧಾನದಲ್ಲಿ ಮೀಸಲಾತಿ ನೀಡಲಾಗುತ್ತಿದೆ. ಆದರೂ ಈ ಮೀಸಲಾತಿ ಮಹಿಳೆಯರ ಪಾಲಿಗೆ ನ್ಯಾಯಯುತವಾಗಿ ದಕ್ಕುತ್ತಿಲ್ಲ ಕುಟುಂಬ ನಿರ್ವಹಣೆಯ ಜೊತೆಗೆ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೋಶಾಧ್ಯಕ್ಷೇ ಚಂದ್ರಕಲಾ ಜಮಖಂಡಿ, ರಜೀಯಾ ಬೇಗಂ, ಅನಸೂಯಾ , ಚಂದ್ರಕಲಾ ಗೂಗಲ್, ಗೊವಿಂದಮ್ಮ ಪಲ್ಮಾರಿ ಅನುಪಮಾ ಆರ್ ಇನ್ನಿತರರಿದ್ದರು.