‘ಭಾರತ್ ಅಕ್ಕಿ’ ವಿತರಣಾ ಸಮಾರಂಬಕ್ಕೆ ಚಾಲನೆ ನೀಡಿದ ಎಂ ಸತೀಶ್ ರೆಡ್ಡಿ

‘ಭಾರತ್ ಅಕ್ಕಿ’ ವಿತರಣಾ ಸಮಾರಂಬಕ್ಕೆ ಚಾಲನೆ ನೀಡಿದ ಎಂ ಸತೀಶ್ ರೆಡ್ಡಿ

ಬೊಮ್ಮನಹಳ್ಳಿ: ಇಂದು ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಹೊಂಗಸಂದ್ರದ ಆಂಜನೇಯಸ್ವಾಮಿ ದೇವಸ್ಥಾನದ ಹತ್ತಿರ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವಂತಹ ಎಂ ಸತೀಶ್ ರೆಡ್ಡಿಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ಮಹತ್ವಾಕಾಂಕ್ಷಿ ‘ಭಾರತ್ ಅಕ್ಕಿ’ ಯ ವಿತರಣಾ ಸಮಾರಂಬಕ್ಕೆ ಚಾಲನೆ ನೀಡಿದರು.

ತಲಾ 5 ಮತ್ತು 10 ಕೆಜಿ ಬ್ಯಾಗ್‌ನಲ್ಲಿ ಮಾರಾಟ ಮಾಡುವ ಈ ಅಕ್ಕಿಗೆ ಪ್ರತಿ ಕೆಜಿಗೆ 29 ರೂ. ದರ ನಿಗದಿ ಪಡಿಸಲಾಗಿದೆ.

ಈ ಸಂದರ್ಭದಲ್ಲಿ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಶ್ರೀಮತಿ ಭಾರತಿ‌ ರಾಮಚಂದ್ರ ರವರು, ಬಿಜೆಪಿ ವಾರ್ಡ್ ಅಧ್ಯಕ್ಷರಾದ ಬಾಬು ರೆಡ್ಡಿ, ಬಿಜೆಪಿ ಮುಖಂಡರಾದ ನಾಗಭೂಷಣ್ ರವರು, ಗೋಪಿನಾಥ್ ರವರು, ರೂಪೇಶ್ ರವರು ಸ್ಥಳೀಯ ಮುಖಂಡರು ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.

Related