ಮಹಾನಾಯಕ ಧಾರಾವಾಹಿ ಡಿಡಿ1 ಚಂದನದಲ್ಲಿ ಪ್ರಸಾರ ಮಾಡಲಿ

ಮಹಾನಾಯಕ ಧಾರಾವಾಹಿ ಡಿಡಿ1 ಚಂದನದಲ್ಲಿ ಪ್ರಸಾರ ಮಾಡಲಿ

ಕೆ.ಆರ್.ಪುರ : ಸರ್ಕಾರಕ್ಕೆ ನಿಜವಾದ ಬದ್ದತೆ, ಆಶಯ ಇದ್ದರೆ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಧಾರಾವಾಹಿ ಡಿಡಿ ಚಂದನ ವಾಹಿನಿಯಲ್ಲಿ ಉಚಿತವಾಗಿ ಪ್ರಕಾರ ಮಾಡಲಿ ಎಂದು ಕರ್ನಾಟಕ ರಿಪಬ್ಲಿಕ್ ಸೇನಾ ರಾಜ್ಯಾದ್ಯಕ್ಷ ಜಿಗಣಿ ಶಂಕರ ಸವಾಲೆಸೆದರು.

ಜೀ ಟಿವಿ ವಾಹಿನಿಯಲ್ಲಿ ಸಂಜೆ ವೇಳೆ ಪ್ರಸಾರವಾಗುತ್ತಿರುವ ಮಹಾನಾಯಕ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಧಾರಾವಾಹಿ ಪರ ಹಾಕಲಾಗಿದ್ದಾಗ ಬ್ಯಾನರ್ ಗೆ ಬೆಂಕಿ ಹಚ್ಚಿರುವ ಕೆಡಿಗೆಡಿಗಳ ವಿರುದ್ದ ಬೆಂಗಳೂರು ಪೂರ್ವ ತಾಲ್ಲೂಕು ಕಛೇರಿ ಆವರ್ಣದಲ್ಲಿ ಹಮ್ಮಿಕೊಳ್ಳಲಾಗಿದೆ ಸಾಂಕೇತಿಕ ಪ್ರತಿಭಟನೆ ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಧಾರಾವಾಹಿ ವೀಷಣೆಗೆ ಟಿವಿ ಇಲ್ಲದವರು ಹೊಸ ಟಿವಿ ಖರೀದಿಸಿದರು, ಹಲವರು ಟಿವಿಗೆ ಪೂಜೆಯನ್ನು ಸಲ್ಲಿಸಿ ನಂತರ ಧಾರಾವಾಹಿ ವೀಕ್ಷಣೆ ಮಾಡುತ್ತಿದ್ದು ಇನ್ನು ಹಲವರು ತಮ್ಮ ಗ್ರಾಮಗಳಲ್ಲಿ ಮಹಾನಾಯಕ ಫ್ಲಕ್ಸ್ ಹಾಕಿ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ.

Related