ವಿದೇಶದಲ್ಲಿನ 5600 ಕನ್ನಡಿಗರು ರಾಜ್ಯಕ್ಕೆ

ವಿದೇಶದಲ್ಲಿನ 5600 ಕನ್ನಡಿಗರು ರಾಜ್ಯಕ್ಕೆ

ಕೆ.ಆರ್ ಪುರ: ಲಾಕ್‍ಡೌನ್‍ನಿಂದ ವಿದೇಶದಲ್ಲಿ ಉಳಿದಿರುವ 5600 ಕನ್ನಡಿಗರನ್ನು ಕರ್ನಾಟಕಕ್ಕೆ ಕರೆ ತರಲಾಗುತ್ತಿದೆಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ತಿಳಿಸಿದರು.

ಕ್ಷೇತ್ರದ ವಿಜಿನಾಪುರ ಮೈದಾನದಲ್ಲಿ ಮಾಜಿ ನಗರಸಭಾ ಸದಸ್ಯ ಬಾಕ್ಸರ್ ನಾಗರಾಜ್ ಅವರ ನೇತೃತ್ವದಲ್ಲಿ 6 ಸಾವಿರ ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು ವಿದೇಶದಿಂದ ಬರುವ ಕನ್ನಡಿಗರನ್ನು ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್‍ನಲ್ಲಿ ಇಡಲಾಗುವುದು ಎಂದರು.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಜೊತೆ  ಸಮಾಲೋಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಮೈಸೂರಿನ ಮೃಗಾಲಯಕ್ಕೆ ಕ್ಷೇತ್ರದ ಪಾಲಿಕೆ ಸದಸ್ಯರು ಹಾಗೂ ಮುಖಂಡರಿಂದ ಸುಮಾರು 84 ಲಕ್ಷ ರೂಪಾಯಿಗಳ ದೇಣಿಗೆ ಸಂಗ್ರಹಿಸಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಬ್ರಾಹ್ಮಣ ನಿಗಮ ಮಂಡಳಿ ಅದ್ಯಕ್ಷ ಸಚ್ಚಿದಾನಂದ ಮೂರ್ತಿ, ಮಾಜಿ ನಾಮ ನಿರ್ದೇಶಿತ ಸದಸ್ಯ ಅಂತೋಣಿ ಸ್ವಾಮಿ, ಮುಖಂಡರಾದ ಚಿದಾನಂದ ಮೂರ್ತಿ, ಮುನೇಗೌಡ, ಇದ್ದರು.

Related