ಸಿದ್ದರಾಮಯ್ಯ ಬಗ್ಗೆ ಅಚ್ಚರಿ ಹೇಳಿಕೆ ನೀಡಿ ಆತಂಕ ಸೃಷ್ಟಿಸಿದ ಜಾರಕಿ ಹೊಳಿ..!

ಸಿದ್ದರಾಮಯ್ಯ ಬಗ್ಗೆ ಅಚ್ಚರಿ ಹೇಳಿಕೆ ನೀಡಿ ಆತಂಕ ಸೃಷ್ಟಿಸಿದ ಜಾರಕಿ ಹೊಳಿ..!

ಬೆಳಗಾವಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಳಗಾವಿ ಶಾಸಕ ರಮೇಶ್ ಜಾರಕಿಹೊಳಿ, ತಮ್ಮ ಮತವನ್ನು ಚಲಾಯಿಸಿದ್ದಾರೆ.

ಮತ ಚಲಾಯಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನನ್ನ ಸಿಡಿ ಪ್ರಕರಣವಾದಾಗ ಎಲ್ಲರೂ ನಗುತ ಕೂತಿದ್ದರು. ಈಗ ಅವರಿಗೆ ಅರಿವಾಗಿದೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು. ಮೊದಲು ನನಗಾಗಿದೆ ಈಗ ಪ್ರಜ್ವಲ ಆಗಿದೆ. ಮುಂದೆ ಸಿದ್ದರಾಮಯ್ಯ ಅವರಿಗೂ ಬರಬಹುದು ಮತ್ತು ಗೃಹ ಸಚಿವ ಜಿ ಪರಮೇಶ್ವರ್ ಅವರು ಈ ಗತಿ ಬರಬಹುದು ಹಾಗಾಗಿ ಮುಖ್ಯಮಂತ್ರಿ ಅವರಿಗೆ ನಾನು ಕೇಳಿಕೊಳ್ಳುವುದೇನೆಂದರೆ ಈ ಸಿಡಿ ಹಾವಳಿ

ರಾಜ್ಯದಲ್ಲಿ ಮೊದಲು ತನ್ನನ್ನು ಟಾರ್ಗೆಟ್ ಮಾಡಲಾಗಿತ್ತು ಮತ್ತು ಈಗ ಮತ್ತೊಬ್ಬ, ಮುಂಬರುವ ದಿನಗಳಲ್ಲಿ ಸಿದ್ದರಾಮಯ್ಯ ಮತ್ತು ಜಿ ಪರಮೇಶ್ವರ್ ಅವರ ಸಿಡಿಗಳು ಬಂದರೂ ಆಶ್ಚರ್ಯವಿಲ್ಲ. ಹಾಗಾಗಿ ನಾನು ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಕೈ ಮುಗಿದು ಕೇಳಿಕೊಳ್ಳುತ್ತಾನೆ, ಈ ಸಿಡಿ ಧಂದೆಯನ್ನು ಕೊನೆಗಾಣಿಲು ಅವರು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ಡಿಕೆ ಶಿವಕುಮಾರ್ ಅವರು ಮೊದಲು ನನ್ನ ಬಗ್ಗೆನೇ ಷಡ್ಯಂತ್ರ ನಡೆಸಿದ್ರು., ಷಡ್ಯಂತ್ರ ನಡೆಸಿರುವ ಬಗ್ಗೆ ನನ್ನ ಹತ್ತಿರ ಪ್ರೂಫ್ ಇದೆ. ನಾನು ಬೇಕಾದರೆ ನಿಮಗೆ ಕೊಡುತ್ತೇನೆ ಎಂದು ಮಾಧ್ಯಮ ಪ್ರತಿನಿಧಿಗೆ ಹೇಳಿದರು.

ಇದನ್ನೂ ಓದಿ: SIT ಎಂದರೆ ಸಿದ್ದರಾಮಯ್ಯ, ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಮ್: ಕುಮಾರಣ್ಣ

ನೋಡ್ರಿ…. ಮಹಾನಾಯಕ ಹಣದಲ್ಲಿ ಬಹಳ ಪ್ರಭಾವ ಇದ್ದರೆ ಹಾಗಾಗಿ ಹಣ ಕೊಟ್ಟು ಎಲ್ಲವನ್ನು ಕೊಂಡುಕೊಳ್ಳುತ್ತಾರೆ. ದೇಶದ ಕಾನೂನು ಉಳಿಬೇಕಾದ್ರೆ ಪ್ರಜ್ವಲ್ ರೇವಣ್ಣ ಅವರ ಪ್ರಕರಣ ಅತ್ಯಂತ ಚುರುಕಾಗಿ ವಿಚಾರಣೆಗೊಳ್ಳಬೇಕು/ ಹಾಗಿದ್ದರೆ ಮಾತ್ರ ನಮ್ಮ ದೇಶದ ಕಾನೂನು ಭದ್ರವಾಗುತ್ತದೆ ಎಂದು ಹೇಳಿದರು.

Related