ಸೂರಿಗಾಗಿ ಅನಿರ್ದಿಷ್ಟಾವಧಿ ಮುಷ್ಕರ

ಸೂರಿಗಾಗಿ ಅನಿರ್ದಿಷ್ಟಾವಧಿ ಮುಷ್ಕರ

ರಾಯಬಾಗ : ಕಳೆದ ವರ್ಷ ಕೃಷ್ಣಾ ನದಿಯಿಂದ ತೊಂದರೆಗೀಡಾಗಿದ್ದ ಭಿರಡಿ ಗ್ರಾಮದ ನೆರೆ ಸಂತ್ರಸ್ತರು ಮಂಗಳವಾರ ಪಟ್ಟಣದ ಮಿನಿವಿಧಾನ ಸೌಧದ ಮುಂದೆ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡರು.

ಪ್ರವಾಹ ಸಂಭವಿಸಿ ಒಂದು ವರ್ಷ ಕಳೆದರೂ ನೆರೆ ಸಂತ್ರಸûರಿಗೆ ಇದುವರೆಗೆ ಮನೆ ಮಂಜೂರಾಗಲಿಲ್ಲ. ಇದರಿಂದ ನೊಂದ ಇವರು ರಾಯಬಾಗ ತಹಶೀಲ್ದಾರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ತಹಶೀಲ್ದಾರ ಹಾಗೂ ನೆರೆ ಸಂತ್ರಸ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಮನೆ ಮಂಜೂರಿಗೆ ಸಂಬಂಧಿಸಿದಂತೆ ಹಲವಾರು ಬಾರಿ ಸಂಬAಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇಲ್ಲಿಯವರಿಗೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸಂತ್ರಸ್ತರು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.

ಈ ಕೂಡಲೇ ಮತ್ತೊಮ್ಮೆ ಸಮೀಕ್ಷೆ ನಡೆಸಿ ಅರ್ಹ ಸಂತ್ರಸ್ತರಿಗೆ ಕೂಡಲೇ ಮನೆಗಳನ್ನು ಮಂಜೂರು ಮಾಡುವವರಿಗೆ ನಾವು ಸತ್ಯಾಗ್ರಹ ಬಿಟ್ಟು ಹೋಗುವುದಿಲ್ಲವೆಂದು ನೆರೆ ಸಂತ್ರಸ್ತರು ಪತ್ರಿಕೆಗೆ ತಿಳಿಸಿದರು.

Related