ಎಚ್.ಡಿ.ಕೆ ಕೇವಲ ಗಾಳಿಯಲ್ಲಿ ಗುಂಡು ಹಾರಿಸುವವರು: ಡಿಕೆಶಿ!

ಎಚ್.ಡಿ.ಕೆ ಕೇವಲ ಗಾಳಿಯಲ್ಲಿ ಗುಂಡು ಹಾರಿಸುವವರು: ಡಿಕೆಶಿ!

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕೇವಲ ಗಾಳಿಯಲ್ಲಿ ಗುಂಡು ಹಾರಿಸುವರು ಎಂದು ಎಚ್ಡಿಕೆ ವಿರುದ್ಧ ಡಿಕೆ ಶಿವಕುಮಾರ್ ಅವರು ಹರಿಹರಿದಿದ್ದಾರೆ.

ಅಧಿಕಾರದಲ್ಲಿದ್ದಾಗ ಹೆಚ್ ಡಿ ಕುಮಾರಸ್ವಾಮಿಯವರು ಏನು ಮಾಡಿದ್ದಾರೆ. ನಾನು ಇವಾಗ ಏನು ಮಾಡುತ್ತಿದ್ದೇನೆ ಎಂದು ಬಹಿರಂಗವಾಗಿ ಚರ್ಚೆಯಾಗಲಿ, ಒಂದು ಟೈಮ್ ಫಿಕ್ಸ್ ಮಾಡಲ್ಲಿ ಅವರೊಂದಿಗೆ ನಾನು ಮಾತನಾಡಲು ಸಿದ್ದ ಎಂದು ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್​ ಅವರು ಕೊಟ್ಟ ಬಹಿರಂಗ ಆಹ್ವಾನವನ್ನು ಮಾಜಿ ಸಿಎಂ ಕುಮಾರಸ್ವಾಮಿ ಸ್ವೀಕಾರ ಮಾಡಿದ್ದಾರೆ ಎನ್ನುವ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಚಾರ ಚರ್ಚೆಗೆ ಅಸೆಂಬ್ಲಿಯಲ್ಲಾದರು ಸರಿ ಅಥವಾ ಯಾವ ಚಾನಲ್​ನಲ್ಲಾದರೂ ಸರಿ ಟೈಂ ಫಿಕ್ಸ್​ ಮಾಡಿ ನಾನು ಮಾತನಾಡುತ್ತೇನೆ ಎಂದರು.

ನವೆಂಬರ್​ ಒಂದನೇ ತಾರೀಕಿನ ಬಳಿಕ ನಾನು ಚರ್ಚೆಗೆ ಸಿದ್ದ, ನಾನೇನು ಮಾಡಿದ್ದೇನೆ ಅವರೇನು ಮಾಡಿದ್ದಾರೆ ಎನ್ನುವುದನ್ನು ಗಾಳಿಯಲ್ಲಿ ಗುಂಡು ಹೊಡೆದಂತೆ ಮಾತನಾಡುವುದಲ್ಲ ಸಮಯ ನಿಗಧಿ ಮಾಡಿ ನಾನು ಚರ್ಚೆ ಮಾಡುತ್ತೇನೆ ಎಂದು ಅವರು ಹೇಳಿದರು.

Related