ಆದಷ್ಟು ಬೇಗ ಮಂಗಳಮಿಖಿ ಸರ್ಕಾರನ ತೆಗೆಯಬೇಕು..!! ಸಿಎಂ ಇಬ್ರಾಹಿಂ

ಬೆಂಗಳೂರು: ನಾನು ಟಿಕೆಟ್ ಆಕಾಂಕ್ಷಿ ಆಗಿರಲಿಲ್ಲ. ಪಕ್ಷದ ಅಧ್ಯಕ್ಷನಾಗಿ ಉದಾತ್ತ ಮನೋಭಾವ ತೋರಿಸಬೇಕು. ಬಡಿಸೋ ಜಾಗದಲ್ಲಿ ಇದ್ದು ನಾವೇ ಊಟಕ್ಕೆ ಕೂತರೆ ಹೇಗೆ? ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಷ್ಟು ಬೇಗ ಮಂಗಳಮುಖಿ ಸರ್ಕಾರ ತೆಗೆಯಬೇಕು. ಗಂಡಸೂ ಅಲ್ಲ, ಹೆಂಗಸೂ ಅಲ್ಲದ ಸರ್ಕಾರವಿದು. 2023ಕ್ಕೆ ಈ ಮಂಗಳಮುಖಿ ಸರ್ಕಾರ ಹೋಗಲಿದೆ. ಇದರ ಜೊತೆ ಹೋರಾಡೋಕೂ ಆಗಲ್ಲ, ಸುಮ್ಮನೆ ಇರೋದಕ್ಕೂ ಆಗಲ್ಲ. ಹೆಂಗಸರಾದರೆ, ಹೆಂಗಸರ ಜೊತೆಗೆ ಕಳುಹಿಸಬಹುದು. ಗಂಡಸರಾದ್ರೆ ಗಂಡಸರ ಜೊತೆ ಕಳುಹಿಸಬಹುದು. ಆದರೆ, ಇವರು ಎರಡೂ ಅಲ್ಲ.
ಭಾಷಾ ಅಂತ ಚಪ್ಪಾಳೆ ತಟ್ಟಿಬಿಡ್ತಾರೆ, ಕಿಸಿಕ್ ಅಂತ ನಗಾಡ್ತಾರೆ. ಏನಾದ್ರೂ ಆರೋಪ ಮಾಡಿದರೆ ಏನು ಮಾಡೋಣ ಎಂದು ಸರ್ಕಾರದ ವಿರುದ್ಧ ಲೇವಡಿ ಮಾಡಿದರು.

Related