ಸೀಬೆ ಹಣ್ಣು ಕೀಳಲು ಹೋದ ಅಕ್ಕ-ತಂಗಿಯರು, ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದು ಸಾವು

  • In Crime
  • May 3, 2022
  • 249 Views

ಸೀಬೆ ಹಣ್ಣು ಆಯತಪ್ಪಿ ಹೊಂಡಕ್ಕೆ ಬಿದಿದ್ದಾರೆ. ಹೊಂಡದಿಂದ ಮೇಲೆ ಬರಲಾಗದೆ ಬಾಲಕಿಯರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಾಲಕಿಯ ಶವಗಳನ್ನು ಮೇಲಕ್ಕೆತ್ತಿದ್ದು ಪಾಲಕರ ಅಕ್ರಂದನ ಮುಗಿಲು ಮುಟ್ಟಿದೆ. 

ಚಾಮರಾಜನಗರ : ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರು ಸಾವನ್ನಪ್ಪಿರುವ ದುರ್ಘಟನೆ ಗುಂಡ್ಲುಪೇಟೆ ತಾಲೂಕು ಕೆಬ್ಬೇಪುರ ಗ್ರಾಮದಲ್ಲಿ ನಡೆದಿದೆ.ಗ್ರಾಮದ ರೇಚಣ್ಣ  ಎಂಬುವವರ ಮಕ್ಕಳಾದ ಪೂಜಿತಾ ಹಾಗೂ ಪುಣ್ಯ ಮೃತ ಸಹೋದರಿಯರು. ರೇಚಣ್ಣ ಅವರು ಜಮೀನು ಮನೆಯಲ್ಲಿ ವಾಸವಿದ್ದು, ಕಾರ್ಯ ನಿಮಿತ್ತ ಮನೆಯವರೊಂದಿಗೆ ಹೊರಗಡೆ ತೆರಳಿದ್ದರಂತೆ.ಮನೆಯಲ್ಲಿ ಅಜ್ಜಿ ಮಾಡಿಕೊಟ್ಟ ತಿಂಡಿ ತಿಂದು ಇಬ್ಬರು ಬಾಲಕಿಯರು ಸೀಬೆಹಣ್ಣು ಕೀಳಲು ತೆರಳಿದ್ದಾರೆ.

ವೇಳೆ ಆಯತಪ್ಪಿ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ. ಹೊಂಡದಿಂದ ಮೇಳೆ ಬರಲಾಗದೆ ಬಾಲಕಿಯರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಾಲಕಿಯರ ಶವಗಳನ್ನು ಮೇಲಕ್ಕೆತ್ತಿದ್ದು ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.

Related