ಅಮಿತ್ ಶಾ ಜೊತೆ ಕಮ-ಲದಳ ನಾಯಕರ ಭರ್ಜರಿ ಬ್ರೇಕ್ ಫಾಸ್ಟ್ ಮೀಟಿಂಗ್..!

ಅಮಿತ್ ಶಾ ಜೊತೆ ಕಮ-ಲದಳ ನಾಯಕರ ಭರ್ಜರಿ ಬ್ರೇಕ್ ಫಾಸ್ಟ್ ಮೀಟಿಂಗ್..!

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜ್ಯದ ರಾಜಧಾನಿ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದಾರೆ.

ಇನ್ನು ಬಿಜೆಪಿ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಅಮಿತ್ ಶಾ ರನ್ನು ಭರ್ಜರಿ ಸ್ವಾಗತಾ ಕೋರಿದ್ದಾರೆ.  ಶಾಲು ಹೊದಿಸುವ ಮೂಲಕ ಅಮಿತ್ ಶಾ ರವರನ್ನು ರಾಜ್ಯಕ್ಕೆ ಸ್ವಾಗತ ಕೋರಿದ್ದಾರೆ.

ಇನ್ನು ಬೆಳಿಗ್ಗೆ ಕೇಂದ್ರ ಗೃಹ ಸಚಿವರ ಜೊತೆ ಬಿಜೆಪಿ ಪಡೆಗಳು ಬ್ರೇಕ್ಫಾಸ್ಟ್ ಮೀಟಿಂಗ್ ನಡೆಸಿದ್ದು ಈ ಮೀಟಿಂಗ್ನಲ್ಲಿ ಬಿಜೆಪಿಯ ಘಟಾನುಘಟಿಗಳು ಭಾಗಿಯಾಗಿದ್ದಾರೆ.

ಬಿಜೆಪಿಯ 15 ಹಾಗೂ ಜೆಡಿಎಸ್‌ ನ 8 ಪ್ರಮುಖ ನಾಯಕರು ಭಾಗಿಯಾಗಲಿದ್ದು ಆಹ್ವಾನಿತ ನಾಯಕರ ಲಿಸ್ಟ್ ಮಾಡಲಾಗಿದ್ದು ಬೆಳಗಿನ ಉಪಹಾರ ಸಭೆಯಲ್ಲಿ ಬಿಎಸ್ ಯಡಿಯೂರಪ್ಪ, ವಿಜಯೇಂದ್ರ ರಾಧಾಮೋಹನ್ ದಾಸ್, ಆರ್ ಅಶೋಕ್ , ಪ್ರಹ್ಲಾದ್ ಜೋಶಿ ಸದಾನಂದಗೌಡ, ಬಸವರಾಜ್, ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್, ಗೋವಿಂದ್ ಕಾರಜೋಳ, ಸಿ.ಟಿ ರವಿ, ಶ್ರೀರಾಮುಲು, ಸಿ.ಎನ್ ಅಶ್ವಥ್ ನಾರಾಯಣ್, ನಿರ್ಮಲ್ ಕುಮಾರ್ ಸುರಾನಾ, ಜಿ.ವಿ ರಾಜೇಶ್, ಜೆಡಿಎಸ್‌ ನಾಯಕರು, ಹೆಚ್.ಡಿ ಕುಮಾರಸ್ವಾಮಿ, ಜಿ.ಟಿ ದೇವೇಗೌಡ, ಬಂಡೆಪ್ಪ ಖಾಶೆಂಪುರ್, ವೆಂಕಟರಾವ್ ನಾಡಗೌಡ, ಪುಟ್ಟರಾಜು, ಸಾ.ರಾ ಮಹೇಶ್, ಹೆಚ್.ಕೆ ಕುಮಾರಸ್ವಾಮಿ ನಿಖಿಲ್ ಕುಮಾರಸ್ವಾಮಿ ಈ ಮೀಟಿಂಗ್ ನಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

 

Related