ಗೋವಿಂದ ಕಾರಜೋಳ ಅವರಿಗೆ ಬಂಡಾಯ ಬಿಸಿ..!

ಗೋವಿಂದ ಕಾರಜೋಳ ಅವರಿಗೆ ಬಂಡಾಯ ಬಿಸಿ..!

ಚಿತ್ರದುರ್ಗ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡದ ಕಾರಣ ಗೋವಿಂದ ಕಾರಜೋಳ ಅವರಿಗೆ ಗೋ ಬ್ಯಾಕ್, ಗೋ ಬ್ಯಾಕ್ ಎಂದು ರಘು ಚಂದನ್ ಕಡೆಯವರು ಗೋವಿಂದ ಕಾರಜೋಳ ಅವರ ಕಾರಿಗೆ ಮುತ್ತಿಗೆ ಹಾಕಿ ದಿಕ್ಕಾರ ಕೂಗಿದ್ದಾರೆ.

ಸ್ಥಳೀಯರಿಗೆ ಟಿಕೆಟ್ ನೀಡಿದೆ ಅನ್ನಿಗರಿಗೆ ಟಿಕೆಟ್ ನೀಡಿರುವುದನ್ನು ನಾವು ಖಂಡಿಸುತ್ತೇವೆ ಎಂದು ರಘು ಚಂದನ್ ಅವರ ಕಡೆಯವರು ಆಕ್ರೋಶ ಹೊರ ಹಾಕಿದ್ದಾರೆ.

ಸ್ಥಳೀಯರಿಗೆ ಟಿಕೆಟ್ ನೀಡಿದರೆ ಸ್ಥಳೀಯರ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಬೇರೊಂದು ಕ್ಷೇತ್ರದ ಅಭ್ಯರ್ಥಿಗೆ ನಮ್ಮ ಕ್ಷೇತ್ರದಲ್ಲಿ ಟಿಕೆಟ್ ನೀಡಿದರೆ ನಾವು ಹೇಗೆ ಅವರಿಗೆ ಮತ ನೀಡಬೇಕು? ಅವರು ನಮ್ಮ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತಾರೆ ಎಂದು ರಘು ಚಂದನ್ ಅವರ ಅಭಿಮಾನಿಗಳು ಆಕ್ರೋಶ ಹೊರ ಹಾಕಿ ಗೋವಿಂದ ಕಾರಜೋರವರಿಗೆ ಗೋ ಬ್ಯಾಕ್ ಎಂದು ದಿಕ್ಕಾರ ಕೂಗಿದ್ದಾರೆ.

ಹೌದು, ಕಾರಜೋಳ ಆಗಮಿಸುವ ಸುದ್ದಿ ತಿಳಿಯುತ್ತಿದ್ದಂತೆಯೇ ಟಿಕೆಟ್ ವಂಚಿತ ರಘು ಚಂದನ್ ಕಡೆಯವರು ಚಳ್ಳಕೆರೆ ಗೇಟ್ ಬಳಿ ಜಮಾಯಿಸಿ ಗೋ ಬ್ಯಾಕ್ ಗೋವಿಂದ ಕಾರಜೋಳ, ಗೋ ಬ್ಯಾಕ್ ಗೋವಿಂದ ಕಾರಜೋಳ ಎಂದು ಭಿತ್ತಿ ಚಿತ್ರ ಹಿಡಿದು ಪ್ರತಿಭಟನೆ ನಡೆಸಿದರು.

ಪರಿಸ್ಥಿತಿಯ ಗಂಭೀರತೆ ಅರಿತು ಜಿಲ್ಲಾ ಪೊಲೀಸರು ಕಾರಜೋಳ ಅವರಿಗೆ ಭದ್ರತೆ ಒದಗಿಸಿದರು. ಬಳಿಕ ಅನಿವಾರ್ಯವಾಗಿ ಕಾರಜೋಳ ಅವರು ಕಚೇರಿಗೆ ತೆರಳಲು ಮತ್ತೊಂದು ಮಾರ್ಗದಲ್ಲಿ ತೆರಳಬೇಕಾಯಿತು.

ಪೊಲೀಸ್ ಅಧೀಕ್ಷಕ ಧರ್ಮೇಂದರ್ ಕುಮಾರ್ ಮೀನಾ ಮಾತನಾಡಿ, ಪೊಲೀಸರು ಅಲರ್ಟ್ ಆಗಿದ್ದರು, ಕೆಲವರು ಗೋವಿಂದ್ ಕಾರಜೋಳ ಅವರ ಮೇಲೆ ಮೊಟ್ಟೆ, ಕಲ್ಲುಗಳನ್ನು ಎಸೆಯಲು ಮುಂದಾಗಿದ್ದರು. ಈ ವೇಳೆ 14 ಜನರನ್ನು ಬಂಧನಕ್ಕೊಳಪಡಿಸಲಾಗಿದೆ. ಇದಲ್ಲದೆ, ಕಪ್ಪು ಬಾವುಟ, ಎಣ್ಣೆ ಹಾಗೂ ಮೊಟ್ಟೆಯನ್ನೂ ಕೂಡ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.

 

Related