ಸರ್ಕಾರಿ ಆಸ್ಪತ್ರೆನಾ, ನರಕಾನಾ!

ಸರ್ಕಾರಿ ಆಸ್ಪತ್ರೆನಾ, ನರಕಾನಾ!

ಹಗರಿಬೊಮ್ಮನಹಳ್ಳಿ : ಹಗರಿಬೊಮ್ಮನಹಳ್ಳಿ ಕೇದಾರ ಪ್ರಕಾಶ್ ಸ್ವಾಮಿ ಎಂಬುವರು ಕೋವಿಡ್ ಪಾಸಿಟಿವ್ ದೃಢವಾದ ಹಿನ್ನಲೆ ಶುಕ್ರವಾರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.

ವೀಡಿಯೋ ಮಾಡಿ ಇಲ್ಲಿ ತನಗೆ ಆಕ್ಸಿಜನ್ ಅಳವಡಿಸಿದ್ದಾರೆ ಇಂಜಕ್ಷನ್ ಇಲ್ಲ ಮಾತ್ರೆ ಇಲ್ಲ ಗ್ಲೂಕೋಸ್ ನಂತ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಸಾವಿಗೂ ಮುನ್ನಾ ದಿನದಂದು ವಿಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ಬಿಟ್ಟಿದ್ದರಿಂದ ರೈತ ಸಂಘದ ಕಾರ್ಯಕರ್ತರು ಬೇಟಿ ನೀಡಿ ವಿಚಾರಿಸಿದರು.

ಸೂಕ್ತ ಚಿಕಿತ್ಸೆ ನೀಡಲು ಆಗ್ರಹಿಸಿದ್ದರು ದುರಾದೃಷ್ಟವಾಶಾತ್ ಕೇದಾರ ಪ್ರಕಾಶ್ ಸ್ವಾಮಿ ನಿಧರಾದರು ಹೀಗಾಗಲೇ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಆಪಾದನೆ ಇದ್ದು ಪ್ರಕಾಶ್ ಸ್ವಾಮಿ ವೀಡಿಯೋ ಆಪಾದನೆ ಪುಷ್ಟಿ ನೀಡುವಂತೆ ಇದೆ.

Related