ಪುನೀತ್ ಭಾವ ಚಿತ್ರಕ್ಕೆ ಅವಮಾನ

  • In State
  • April 29, 2022
  • 189 Views
ಪುನೀತ್ ಭಾವ ಚಿತ್ರಕ್ಕೆ ಅವಮಾನ

ದಿವಂಗತ ನಟ ಡಾ.ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಆಂಧ್ರಪ್ರದೇಶದ ಪೊಲೀಸರು ಅವಮಾನಿಸಿರುವ ಘಟನೆ ಬುಧವಾರ ತಿರುಪತಿಯಲ್ಲಿ ನಡೆಯಿತು ಎಂದು ಗಜಸೇನೆ ಸಂಘಟನೆ ರಾಜ್ಯಾಧ್ಯಕ್ಷ ತಾಯ್ನಾಡು ರಾಘವೇಂದ್ರ ತಿಳಿಸಿದ್ದಾರೆ.ಬೆಂಗಳೂರು ನಗರದಿಂದ ತಿರುಪತಿಗೆ ತೆರಳಿದ್ದ ವಾಹನದ ಹಿಂಬದಿಯಲ್ಲಿ ಪುನೀತ್ ರಾಜ್ ಕುಮಾರ್ ಭಾವಚಿತ್ರ ಅಂಟಿಸಲಾಗಿತ್ತು. ತಿರುಮಲ ಪ್ರವೇಶಕ್ಕೂ ಮುನ್ನ ಸಿಗುವ ಟೋಲ್ ಗೇಟ್ ನಲ್ಲಿ ಭಾವಚಿತ್ರವನ್ನು ತೆರವುಗೊಳಿಸುವಂತೆ ಸಿಬ್ಬಂದಿ ಸೂಚಿಸಿದರು. ಇದಕ್ಕೆ ನಿರಾಕರಿಸಿದಾಗ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿ ಭದ್ರತಾ ಸಿಬ್ಬಂದಿಯೇ ಫೋಟೋ ತೆರವುಗೊಳಿಸಿದರು ಎಂದು ಅವರು ಆರೋಪಿಸಿದ್ದಾರೆ.

ತಾವು ಕರ್ನಾಟಕ ರಾಜ್ಯದಿಂದ ಎರಡು ಕಾರುಗಳಲ್ಲಿ  ತಿರುಪತಿಗೆ ತೆರಳಿದ್ದು, ಒಂದಕ್ಕೆ ಪುನೀತ್ ರಾಜ್ ಕುಮಾರ್ ಫೊಟೋ ಅಂಟಿಸಲಾಗಿತ್ತು. ಮತ್ತೊಂದು ವಾಹನದಲ್ಲಿದ್ದವರು ಕನ್ನಡ ಶಲ್ಯಗಳನ್ನು ಹಾಕಿಕೊಂಡಿದ್ದರು. ಎರಡೂ ವಾಹನಗಳನ್ನ ತಡೆದ ಭದ್ರತಾ ಸಿಬ್ಬಂದಿ ಸ್ಪಿಕ್ಕರ್ ಮತ್ತು ಶಲ್ಯಗಳನ್ನು ವಶಕ್ಕೆ ಪಡೆದು ತಿರುಮಲ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರು ಎಂದು ಅವರು ಹೇಳಿದ್ದಾರೆ.

Related