ಬಿಜೆಪಿ ಸರ್ಕಾರದಿಂದ ಛತ್ತೀಸ್‍ಗಢದ ಜನತೆಗೆ ಸಿಹಿ ಸುದ್ದಿ

ಬಿಜೆಪಿ ಸರ್ಕಾರದಿಂದ ಛತ್ತೀಸ್‍ಗಢದ ಜನತೆಗೆ ಸಿಹಿ ಸುದ್ದಿ

ರಾಯ್‍ಪುರ: ಹೊಸ ವರ್ಷದಿಂದ ಛತ್ತೀಸ್ಗಡದ ಜನತೆಗೆ ಬಿಜೆಪಿ ಸರ್ಕಾರ ಹೊಸ ಯೋಜನೆಯನ್ನು ನೀಡಿದ್ದು ಪ್ರತಿ ತಿಂಗಳು ಬಡವರಿಗೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಣೆ ಮಾಡು ಮಾಡಲಾಗುವುದು ಎಂದು ತಿಳಿದುಬಂದಿದೆ.

ಜನವರಿ 20204 ರಿಂದ ಇನ್ನು ಮುಂದೆ ಐದು ವರ್ಷ ಪ್ರತಿ ತಿಂಗಳು 5 ಕೆಜಿ ಅಕ್ಕಿಯನ್ನು ನೀಡುವುದಾಗಿ ಛತ್ತೀಸ್ಗಡದ ಬಿಜೆಪಿ ಸರ್ಕಾರ ಮಾಹಿತಿಯನ್ನು ನೀಡಿದೆ.

80 ಕೋಟಿ ಬಡವರನ್ನು ಒಳಗೊಂಡಿರುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಐದು ವರ್ಷಗಳವರೆಗೆ ವಿಸ್ತರಿಸುವ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯ ರೀತಿಯಲ್ಲಿ ಛತ್ತೀಸ್‍ಗಢ ರಾಜ್ಯ ಆಹಾರ ಭದ್ರತಾ ಕಾಯ್ದೆಯಡಿ ಮುಂದಿನ ಐದು ವರ್ಷಗಳವರೆಗೆ ಬಡ ಕುಟುಂಬಗಳಿಗೆ ಉಚಿತ ಅಕ್ಕಿ ನೀಡಲು ಸರ್ಕಾರ ನಿರ್ಧರಿಸಿದೆ.

ಮುಖ್ಯಮಂತ್ರಿ ವಿಷ್ಣು ದೇವು ಸಾಯಿ ಅವರ ನಿರ್ದೇಶನದ ಮೇರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಂತಹ ಅಂತ್ಯೋದಯ ಮತ್ತು ಆದ್ಯತಾ ವರ್ಗದ ಪಡಿತರ ಚೀಟಿದಾರರಿಗೆ ಮುಂದಿನ ಐದು ವರ್ಷಗಳ ಜನವರಿ 2024 ರಿಂದ ಡಿಸೆಂಬರ್ 2028 ರವರೆಗೆ ಮಾಸಿಕ ಅರ್ಹತೆಯ ಪ್ರಕಾರ ಉಚಿತ ಆಹಾರ ಧಾನ್ಯಗಳನ್ನು ವಿತರಿಸಲು ಸೂಚನೆಗಳನ್ನು ನೀಡಲಾಗಿದೆ.

 

Related