ಚಂದಾಪುರ: ಕಾಂಗ್ರೆಸ್ ಬಿಟ್ಟಿ ಭಾಗ್ಯಯೋಜನೆಗಳ ಮೂಲಕ ಕರ್ನಾಟಕದ ಜನತೆಯನ್ನು ವಂಚಿಸಿದೆ ಇದು ಧೀರ್ಘಕಾಲ ಉಳಿಯುವುದಿಲ್ಲ ಎಂದು ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದರು.
ಅವರ ಇಂದು ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಸತೀಶ್ ರೆಡ್ಡಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವ ರಾಜೀವ್ ಚಂದ್ರಶೇಖರ್ ಅವರೊಂದಿಗೆ ಕಾರ್ಯಕರ್ತರ ಸಂವಾದ, ಉಪಹಾರ ಕೂಟ ಹಾಗೂ ಸಂಘಟನಾತ್ಮಕ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಎತ್ತಿಹಿಡಿದು, ಮಾತು ತಪ್ಪಿದ ಕಾಂಗ್ರೆಸ್ ಎಂಬುದಾಗಿ ಪ್ರತಿಭಟನೆ ನಡೆಸಿ ಜನರನ್ನು ಜಾಗೃತಗೊಳಿಸಬೇಕು, ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ಮನದಟ್ಟು ಮಾಡಿಸುವ ಮೂಲಕ ಬಿಜೆಪಿಯ ಕಾರ್ಯಕರ್ತರು ಬಲಿಷ್ಠವಾದ ಸಂಘಟನಾತ್ಮಕ ಹೋರಾಟಕ್ಕೆ ಮುಂದಾಗಿ ಎಂದರು.
ಗಿಮಿಕ್ ಸರ್ಕಾರ ಗ್ಯಾರಂಟಿ ಇಲ್ಲ
ಇದೇ ಸಂದರ್ಭದಲ್ಲಿ ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ ರೆಡ್ಡಿ ಮಾತನಾಡಿ 200 ಯೂನಿಟ್ ಕರೆಂಟ್ ಪ್ರೀ ಎಂದು ಹೇಳಿ ಕರೆಂಟ್ ಬಿಲ್ ಕೊಟ್ಟು ಜನರಿಗೆ ಕರೆಂಟ್ ಶಾಕ್ ಕೊಟ್ಟಿದ್ದಾರೆ. ಐದು ಯೋಜನೆಗಳು ಪ್ರೀ ಅಂತ ಹೇಳಿ ಜನರ ಮೂಗಿಗೆ ತುಪ್ಪ ಸವರಿ ಗಿಮಿಕ್ ಮಾಡುತ್ತಿದ್ದಾರೆ ಈ ಸರ್ಕಾರ ಗ್ಯಾರಂಟಿಯೇ ಇಲ್ಲ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಹಾಗೂ ಗೋಕುಲ್ ಗ್ರೂಫ್ ಮಾಲೀಕರಾದ ನ್ಯಾನಪನಹಳ್ಳಿ ಮಂಜುನಾಥ್, ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ,ಬೆಂ.ದಕ್ಷಿಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬಿ.ರವಿ, ಮಾಜಿ ಬಿಬಿಎಂಪಿ ಸದಸ್ಯ ಗುರುಮೂರ್ತಿ ರೆಡ್ಡಿ, ಜಗರಗನಹಳ್ಳಿ ಎ.ಟಿ.ಲೋಕೇಶ್ ಗೌಡ, ಮುನಿರಾಜ್ ಗೌಡ, ಅಗರ ಕೃಷ್ಣಪ್ಪ, ಬೆಂಗಳೂರು ಮಹಿಳಾ ಮೋರ್ಚಾದ ಮುಖಂಡರಾದ ವಿಜಯಲಕ್ಷ್ಮಿಗೌಡ, ರಾಣಿಶ್ರೀನಿವಾಸ್ ರೆಡ್ಡಿ, ಸಿಂಗಸಂದ್ರವಾರ್ಡ್ ವಾರ್ಡ್ ಅಧ್ಯಕ್ಷ ಪ್ರತೀಶ್ ರೆಡ್ಡಿ, ಯುವ ಮುಖಂಡ ಹೊಂಗಸಂದ್ರ ಸೋಮಶೇಖರ್ ಸೇರಿದಂತೆ ನಿಕಟಪೂರ್ವ ಬಿಬಿಎಂಪಿ ಸದಸ್ಯರು, ಬಿಜೆಪಿ ಪಧಾದಿಕಾರಿಗಳು, ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.