ಕನ್ನಡ ರಾಜ್ಯೋತ್ಸವ ಅಂಗವಾಗಿ ಉಚಿತ ತಪಾಸಣೆ ಶಿಬಿರ

ಕನ್ನಡ ರಾಜ್ಯೋತ್ಸವ ಅಂಗವಾಗಿ ಉಚಿತ ತಪಾಸಣೆ ಶಿಬಿರ

ಬೆಂಗಳೂರು,ನ.1: 68ನೇ ಕನ್ನಡ ರಾಜ್ಯೋತ್ಸವ ಹಾಗೂ ಡಾ.ಪುನೀತ್ ರಾಜ್‌ಕುಮಾರ್ ರವರ ಸವಿನೆನಪಿನಲ್ಲಿ ಲಯನ್ಸ್ ಕ್ಲಬ್ ಬೆಂಗಳೂರು ಪೂರ್ವ ಮತ್ತು ಡಿ.ಕೆ ಮೋಹನ್ ಬಾಬು, ಡಿ.ಕೆ.ರಮೇಶ್, ಎಂ.ಎನ್ ರಮೇಶ್ ಇವರ ಸಹಯೋಗದೊಂದಿಗೆ ಖ್ಯಾತ ನೇತ್ರ, ಕಿವಿ ಮತ್ತು ಮೂಗು ತಜ್ಞರಿಂದ ಉಚಿತ ನೇತ್ರ, ಕಿವಿ ಮತ್ತು ಮೂಗು ತಪಾಸಣಾ ಶಿಬಿರವನ್ನು  ದೇವಸಂದ್ರದ ಭಾರತೀಯ ವಿದ್ಯಾ ನಿಕೇತನ ಪದವಿ ಪೂರ್ವ ಕಾಲೇಜ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಳಾದ ಡಿ.ಕೆ. ಮೋಹನ್ ಬಾಬು ರವರು ಉದ್ಘಾಟಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಬಿರದಲ್ಲಿ ಸಂಪೂರ್ಣ ಕಣ್ಣಿನ ಮತ್ತು ಕಿವಿಯ ತಪಾಸಣೆ, ಉಚಿತ ಕನ್ನಡಕ ಮತ್ತು ಕಿವಿ ಯಂತ್ರವನ್ನು ನೀಡಲಾಗುವುದು, ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ತಪಾಸಣೆಗಾಗಿ ಬಂದ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ದೇವಸಂದ್ರದ ಕಾಂಗ್ರೆಸ್‌ ಮುಖಂಡರಾದ ಡಿ.ಕೆ.ರಮೇಶ್, ಎಂ.ಎನ್ ರಮೇಶ್ , ಲಯನ್ಸ್ ಕ್ಲಬ್ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

Related