ಇಡೀ ಜಗತ್ತೇ ನನ್ನ ಮೇಲೆ ತಿರುಗಿ ನಿಂತರೂ, ಈ ನ್ಯಾಯಾತ್ರೆ ಕೈಬಿಡುವುದಿಲ್ಲ: ರಾಹುಲ್ ಗಾಂಧಿ

ಇಡೀ ಜಗತ್ತೇ ನನ್ನ ಮೇಲೆ ತಿರುಗಿ ನಿಂತರೂ, ಈ ನ್ಯಾಯಾತ್ರೆ ಕೈಬಿಡುವುದಿಲ್ಲ: ರಾಹುಲ್ ಗಾಂಧಿ

ಅಸ್ಸಾಂ: ರಾಹುಲ್ ಗಾಂಧಿಯವರು ಸತತವಾಗಿ ಭಾರತ್ ಜೋಡೋ ನ್ಯಾಯ ಯಾತ್ರೆಗೆಯನ್ನು ಕೈಗೊಂಡಿದ್ದು, ಇಂದು ಅಸ್ಸಾಂನಲ್ಲಿ ಬಿಜೆಪಿ ನಾಯಕರುಗಳು ಈ ಭಾರತ್ ಜೋಡೋ ನ್ಯಾಯಾತ್ರೆಯನ್ನು ತಡೆದು ಸಂಘರ್ಷಣೆ ಉಂಟು ಮಾಡಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನ ಮುಖಂಡ ರಾಹುಲ್ ಗಾಂಧಿಯವರು, ಭಾರತ್ ಜೋಡೋ ನ್ಯಾಯಾತ್ರೆಗೆ ಇಡೀ ಜಗತ್ತೇ ನನ್ನ ಮೇಲೆ ತಿರುಗಿ ನಿಂತರು ಕೂಡ ನಾನು ಈ ನ್ಯಾಯಾತ್ರೆಯನ್ನು ಕೈಬಿಡುವುದಿಲ್ಲ ವೆಂದು ಹೇಳಿದ್ದಾರೆ.

ನನ್ನ ಸತತ ಹೋರಾಟ ಯಾರೇ ಬಂದರೂ, ಹೋದರು ಈ ಹೋರಾಟವನ್ನು ನಾನು ಕೈ ಬಿಡುವುದಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. ಇಡೀ ಜಗತ್ತೇ ನನ್ನ ವಿರುದ್ಧ ತಿರುಗಿ ನಿಂತರು ನಾನು ಮಾತ್ರ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ನನಗೆ ಸಂತೋಷವಾಗಿದೆ. ಬಿಜೆಪಿ ಭಾರತ್ ಜೋಡೋ ನ್ಯಾಯ ಯಾತ್ರೆಗೆ ಅಡ್ಡಿಪಡಿಸುವ ಮೂಲಕ ನಮಗೆ ಸಹಾಯವನ್ನೇ ಮಾಡುತ್ತಿದೆ. ಇದ್ದರಿಂದ ಎಲ್ಲೆಡೆ ನಮಗೆ ಹೆಚ್ಚಿನ ಪ್ರಚಾರ ದೊರೆಯಲಿದೆ ಎಂದರು.

ಇನ್ನು ಯಾತ್ರೆ ವೇಳೆ ನಡೆದ ಘರ್ಷಣೆಯಿಂದ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಿಗೆ ಸ್ವಲ್ಪ ಗಾಯವಾಗಿದೆ. ಇದು, ಭಯಪಡುವ ವಿಚಾರವೇ ಅಲ್ಲ. ಈ ಸಮಸ್ಯೆಯನ್ನು ನಾನು ಬಗೆಹರಿಸುತ್ತೇನೆ. ಈ ಯಾತ್ರೆಯನ್ನು ಮಾಡಲು ನಿರ್ಧರಿಸಲಾಗಿದೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ನನ್ನ ಸಿದ್ಧಾಂತಕ್ಕಾಗಿ ಹೋರಾಡಿಯೇ ತೀರುತ್ತೇನೆ ಎಂದರು.

Related