ಬೆಂಗಳೂರು, ಫೆ. 17 : ವೈಟ್ಫೀಲ್ಡ್ನ ಕುಂದಲಹಳ್ಳಿ ರಸ್ತೆಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ನೀರಿನ ಟ್ಯಾಂಕರ್ಗೆ ಬಲಿಯಾಗಿದ್ದಾನೆ. ಇಂದಿರಾನಗರ ನಿವಾಸಿ ಟೆಕ್ಕಿ ಶ್ರೇಯಸ್ ಆಚಾರ್ಯ (26) ಮೃತ ಯುವಕ. ಭಾನುವಾರ (ಫೆ.16) ಬೆಳಗ್ಗೆ ಕೆಲಸದ ನಿಮಿತ್ತ ದ್ವಿಚಕ್ರ ವಾಹನದಲ್ಲಿ ಮಾರತ್ತಹಳ್ಳಿಯಿಂದ ವೈಟ್ಫೀಲ್ಡ್ ಕಡೆಗೆ ಕುಂದಲಹಳ್ಳಿಯ ಏಕಮುಖ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ನೀರಿನ ಟ್ಯಾಂಕರ್ ಡಿಕ್ಕಿ ಹೊಡೆದಿದೆ.
ಗಂಭೀರವಾಗಿ ಗಾಯಗೊಂಡ ಶ್ರೇಯಸ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಅಪಘಾತ ಎಸಗಿದ ಬಳಿಕ ಟ್ಯಾಂಕರ್ ಚಾಲಕ ವಾಹನ ಸಮೇತ ಪರಾರಿಯಾಗಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ವೈಟ್ಫೀಲ್ಡ್ ಸಂಚಾರ ಪೊಲೀಸರು ತಿಳಿಸಿದ್ದಾರೆ.