ಎಲ್ಲಾ ಸಮಾಜದ ಅಭಿವೃದ್ಧಿಗೆ ಒತ್ತು

ಎಲ್ಲಾ ಸಮಾಜದ ಅಭಿವೃದ್ಧಿಗೆ ಒತ್ತು

ಪಿರಿಯಾಪಟ್ಟಣ: ಪ್ರತಿಯೊಂದು ಸಮಾಜದ ವರು ಹಾಕಿದ ಮತಗಳಿಂದ ನಾನು ಶಾಸಕನಾಗಿದ್ದೇನೆ ಹೊರತು ಒಂದು ಜಾತಿ ಮತದಿಂದ ನಾನು ಶಾಸಕ ನಾಗಿಲ್ಲ ಆದ್ದರಿಂದ ಪ್ರತಿಯೊಂದು ಸಮಾಜದ ಅಭಿವೃದ್ಧಿಗೆ ಒತ್ತು ನೀಡಬೇಕಾಗಿದೆ ಎಂದು ಶಾಸಕ ಕೆ. ಮಹದೇವ ತಿಳಿಸಿದರು.

ಅವರು ತಾಲೂಕಿನ ಕಿರನಲ್ಲಿ ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದ ರಸ್ತೆ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ನಾನು ಶಾಸಕನಾಗಿ ಆಯ್ಕೆ ಆಗಬೇಕಾದರೆ ಸರ್ವಜನಾಂಗದವರು ಆಶೀರ್ವಾದ ಮಾಡಿದ್ದರಿಂದಲೇ ಶಾಸಕನಾಗಿದ್ದೇನೆ. 3ವರ್ಷ ಮುಗಿದಿದೆ ಇನ್ನು ಎರಡು ವರ್ಷ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿಲ್ಲ ಕಾರಣ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಈ ತಾಲೂಕಿಗೆ ತಂದು ಅಭಿವೃದ್ಧಿಪಡಿಸಿದೆ ಈಗ ವಿರೋಧ ಪಕ್ಷದವರು ಅಧಿಕಾರ ನಡೆಸುತ್ತಿದ್ದಾರೆ ಅವರನ್ನು ಕಾಡಿಬೇಡಿ ಅನುದಾನ ತಂದು ತಾಲೂಕನ್ನು ಅಭಿವೃದ್ಧಿಪಡಿಸಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ ಎನ್ ರವಿ. ತಾಪಂ, ಸದಸ್ಯ ಟಿ. ಈರಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಸದಸ್ಯರಾದ ಓಂಕಾರ್ ಅಶ್ವಿನಿ ಸ್ವಾಮಿ ನಂಜುಂಡೇಗೌಡ ಮಾಜಿ ಸದಸ್ಯ ಕೆ ಎಂ ರಮೇಶ್ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದೇಗೌಡ, ಕ್ಷೇತ್ರ ಶಿಕ್ಷಣ ಅಧಿಕಾರಿ ವೈ.ಕೆ.ತಿಮ್ಮೇಗೌಡ, ಎಇಇ ದಿನೇಶ್, ಜಯಂತ್, ಪಾಷ. ಕುಮಾರ , ಭೂಮಾಪನ ಇಲಾಖೆಯ ಎಂ.ಕೆ. ಪ್ರಕಾಶ್, ತಾ ಪಂ ಸಹಾಯಕ ನಿರ್ದೇಶಕ ರಘುನಾಥ್, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಪಾಂಡು, ಮುಖಂಡರಾದ ಎಸ್ ಲಿಂಗಪ್ಪ ದೇವದಾಸ್ ರಾಜೇಗೌಡ ಮುತ್ತುರಾಜ್ ಶ್ರೀನಾಥ್ ರಮೇಶ ಸೆರಿದಂತೆ ಮತ್ತಿತರರು ಹಾಜರಿದ್ದರು.

Related