ಬೆಂಗಳೂರು: ಕ್ರೂರಿ ಪತಿಯೊಬ್ಬ ವರದಕ್ಷಿಣೆ ಹಣಕ್ಕೆ ಆಸೆಪಟ್ಟು ಪತ್ನಿಯ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ವಿಕೃತಿ ಮೆರೆದಿದ್ದು, ಪತ್ನಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಕೃತ್ಯ ಎಸಗಿದ ಪತಿ ಸೂರಜ್ ಸಿಂಗ್ ನಗರದ ಟಿಸಿ ಪಾಳ್ಯದಲ್ಲಿ ವಾಸವಿದ್ದು, ಇದೀಗ ಆತ ಹಾಗೂ ಆತನ ತಾಯಿ ತಲೆಮರೆಸಿಕೊಂಡಿದ್ದಾರೆ.
ಪತಿ ಸೂರಜ್ ಸಿಂಗ್ ಹಾಗೂ ಆತನ ತಾಯಿ, ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಮದುವೆಯಾದ ಆರಂಭದಿಂದಲೂ ತವರಿನಿಂದ ಹಣ ತರುವಂತೆ ಪೀಡಿಸುತ್ತಿದ್ದರು. ಇವರ ಹಿಂಸೆ ತಾಳಲಾರದೆ ಎರಡು ಬಾರಿ ತವರಿನಿಂದ ಹಣ ತಂದು ಕೊಟ್ಟಿದ್ದಳು. ಆದರೂ ಸೂರಜ್ ಆಕೆಯನ್ನು ಪೀಡಿಸುವುದನ್ನು ಬಿಟ್ಟಿರಲಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ. ನಂತರ ಪತಿ ಸೂರಜ್ ಪತ್ನಿಯ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ತಾಯಿ, ಮಗ ಪರಾರಿಯಾಗಿದ್ದಾರೆ.
ರಾಮಮೂರ್ತಿ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸೂರಜ್ಗಾಗಿ ಪೆÇಲೀಸರು ಹುಡುಕಾಟ ಆರಂಭಿಸಿದ್ದಾರೆ.