ಡಿಸಿಎಂ ಭೇಟಿ ಮಾಡಿದ ಬಿ ವೈ ರಾಘವೇಂದ್ರ

ಡಿಸಿಎಂ ಭೇಟಿ  ಮಾಡಿದ ಬಿ ವೈ ರಾಘವೇಂದ್ರ

ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪನವರ ಪುತ್ರ, ಸಂಸದ ಬಿ ವೈ ರಾಘವೇಂದ್ರ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಕುಮಾರಕೃಪಾ ಅತಿಥಿ ಗೃಹದಲ್ಲಿ ಸೋಮವಾರ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.

ಹೌದು, ಧಿಕಾರಕ್ಕೆ ಬಂದ ಬಳಿಕ ಡಿ.ಕೆ. ಶಿವಕುಮಾರ್ ವಿರೋಧ ಪಕ್ಷದ ನಾಯಕರ ವಿರುದ್ಧ ಟೀಕೆಗಳನ್ನು ಮಾಡುತ್ತಿಲ್ಲ. ಅವರ ಈ ಧೋರಣೆ ಶಿವಮೊಗ್ಗದ ಬಿಜೆಪಿ ಸಂಸದ ಮತ್ತು ಯಡಿಯೂರಪ್ಪನವರ ಪುತ್ರ ಬಿವೈ ರಾಘವೇಂದ್ರ  ಅವರಿಗೆ ಬಹಳ ಮೆಚ್ಚಿಕೆಯಾಗಿದೆ. ಇಂದು ಶಿವಕುಮಾರ್ ಅವರನ್ನು ಅವರ ಕಚೇರಿಯಲ್ಲಿ ಭೇಟಿಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ರಾಘವೇಂದ್ರ, ಉಪ ಮುಖ್ಯಮಂತ್ರಿಗಳನ್ನು ಮನಸಾರೆ ಹೊಗಳಿದರು. ಸೌಜನ್ಯದ ಭೇಟಿಗಾಗಿ ಬಂದಿದ್ದಾಗಿ ಹೇಳಿದ ಸಂಸದ, ಷಿಕಾರಿಪುರದಲ್ಲಿ ಕ್ಯಾಟಲ್ ಫೀಡ್ ತಯಾರಿಸುತ್ತಿದ್ದ ಫ್ಯಾಕ್ಟರಿಯೊಂದರಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 85 ಜನ ಕಾರ್ಮಿಕರನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಿರುವ ವಿಷಯವನ್ನು ಉಪ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅವರು ಭೂಮಿ ನೀಡಿದ ರೈತರಾಗಿರುವುದರಿಂದ ಅನ್ಯಾಯವಾಗಬಾರದು ಅಂತ ಹೇಳಿದ್ದಕ್ಕೆ ಅವರಿಂದ ಪಾಸಿಟಿವ್ ಪ್ರತಿಕ್ರಿಯೆ ಬಂದಿದೆ ಎಂದು ಹೇಳಿದರು.

Related